ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದಲೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೆವೆ: ಶ್ರೀರಾಮುಲು

ಗುರುವಾರ, 6 ಫೆಬ್ರವರಿ 2014 (18:10 IST)
PR
ಬಳ್ಳಾರಿ: ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಕೆಜೆಪಿಯಿಂದ ಬಿಜೆಪಿಗೆ ಮರಳಿ ಬಂದ ಬಳಿಕ ಬಿಎಸ್‌‌ಆರ್‌ ಪಕ್ಷದ ಸಂಸ್ಥಾಪಕ ಶಾಸಕ ಬಿ. ಶ್ರೀರಾಮುಲು ಬಿಜೆಪಿಗೆ ಸೇರಲಿದೆ ಎಂದು ವದಂತಿಗಳು ಹರಡಿದದ್ದವು. ಆದರೆ ಬಿಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಯಾವುದೇ ಪಕ್ಷದಲ್ಲಿ ವಿಲೀನಗೊಳಿಸಲ್ಲ, ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಶಾಸಕ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ರಾಯಚೂರಿನಿಂದ ಸ್ವತಂತ್ರವಾಗಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ಎಂದು ಶ್ರೀರಾಮಲು ತಿಳಿಸಿದ್ದಾರೆ .

ಅಬ್ಯರ್ಥಿಗಳ ಆಯ್ಕೆ ಮತ್ತು ಇತರೆ ಲೋಕಸಭಾ ಚುನಾವಣೆ ಕುರಿತು ಪಕ್ಷದ ಶಾಸಕರು ಮತ್ತು ಮುಖಂಡರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಶ್ರೀರಾಮಲು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ