ಬಿಜೆಪಿಯತ್ತ ಸಿಂಧ್ಯಾ ಒಲವು, ರಾಜೂಗೌಡ 28ರಂದು ಬಿಜೆಪಿಗೆ

ಶನಿವಾರ, 22 ಫೆಬ್ರವರಿ 2014 (11:35 IST)
PR
PR
ಬಿಜೆಪಿಯತ್ತ ಪಿ.ಜಿ.ಆರ್. ಸಿಂಧ್ಯಾ ಒಲವು ತೋರಿಸಿದ್ದಾರೆಂದು ತಿಳಿದುಬಂದಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ರಾಷ್ಟ್ರೀಯ ಬಿಜೆಪಿ ನಾಯಕರೊಂದಿಗೆ ಒಂದು ಸುತ್ತಿನ ಚರ್ಚೆಯನ್ನು ಅವರು ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಿಂಧ್ಯಾ ಅವರಿಗೆ ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ತಿಳಿದು ಬಿಜೆಪಿಗೆ ಸೇರುವುದಕ್ಕೆ ಒಲವು ತೋರಿದ್ದಾರೆ. ಬಿಜೆಪಿಗೆ ಸೇರಿದರೆ ತಮ್ಮ ರಾಜಕೀಯ ಭವಿಷ್ಯ ಚೆನ್ನಾಗಿರಬಹುದು ಎಂದು ತಮ್ಮ ಆಪ್ತವಲಯದಲ್ಲಿ ಅನಿಸಿಕೆ ತೋಡಿಕೊಂಡಿದ್ದರು. ಮಾಜಿ ಸಚಿವ ರಾಜೂಗೌಡ ಕೂಡ ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆಂಬ ಸುದ್ದಿ ಬಂದಿದೆ. ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆಗೆ ಏರುವ ಅವಕಾಶ ಹೆಚ್ಚಾಗಿರುವುದರಿಂದ ಬಿಜೆಪಿಗೆ ಸೇರಿದರೆ ತಮ್ಮ ರಾಜಕೀಯ ಭವಿಷ್ಯ ಹಸನಾಗಿರುತ್ತದೆ ಎಂದು ಅನೇಕ ಜೆಡಿಎಸ್ ನಾಯಕರು ಭಾವಿಸಿದ್ದಾರೆ.

ಫೆಬ್ರವರಿ 28ರಂದು ರಾಜೂಗೌಡ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆಂಬ ಮಾಹಿತಿಯನ್ನು ಯಡಿಯೂರಪ್ಪ ಹೊರಹಾಕಿದರು. ಗುಲ್ಬರ್ಗ ನಗರಕ್ಕೆ ನರೇಂದ್ರ ಮೋದಿ 28ರಂದು ಬರುತ್ತಿದ್ದು, ಆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜೂಗೌಡ ಬಿಜೆಪಿಗೆ ಸೇರ್ಪಡೆಯಾಗುವುದು ನಿಗದಿಯಾಗಿದೆ. ರಾಯಚೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ರಾಜೂಗೌಡ ಅವರನ್ನು ಜೆಡಿಎಸ್ ಅಭ್ಯರ್ಥಿಯೆಯೆಂದು ಸೂಚಿಸಲಾಗಿತ್ತು. ಈಗ ಬಿಜೆಪಿಗೆ ಸೇರಲಿರುವುದರಿಂದ ರಾಜೂಗೌಡ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದರೆ ಆಶ್ಚರ್ಯವಿಲ್ಲವೆನ್ನಲಾಗಿದೆ.

ವೆಬ್ದುನಿಯಾವನ್ನು ಓದಿ