ಬೆನ್ನಿಹಿನ್ ಕರ್ನಾಟಕದ ನೆಲದಲ್ಲಿ ಕಾಲಿಡಲು ಬಿಡೋದಿಲ್ಲ: ಮುತಾಲಿಕ್

ಮಂಗಳವಾರ, 24 ಡಿಸೆಂಬರ್ 2013 (10:44 IST)
PR
PR
ಬೆಂಗಳೂರು: ಸುಮಾರು ಎಂಟು ವರ್ಷಗಳ ನಂತರ ವಿವಾದಾತ್ಮಕ ಧರ್ಮಗುರು ಬೆನ್ನಿಹಿನ್ ಯಲಹಂಕದ ಏರ್‌ಫೋರ್ಸ್ ಕ್ಯಾಂಪಸ್‌ನಲ್ಲಿ ಧಾರ್ಮಿಕ ಉಪನ್ಯಾಸ ಮಾಡುತ್ತಿದ್ದು ಇದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜ.15ರಂದು 17ರವೆರೆಗೆ ಈ ಬಾರಿ ಕಾರ್ಯಕ್ರಮ ಆಯೋಜನೆಯಾಗಿದೆ. ಇದು ಮತಾಂತರದ ಹುನ್ನಾರವಾಗಿದೆ, ಮಾಟ, ಮಂತ್ರವಾಗಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಧರ್ಮ ಪ್ರಚಾರಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವಿದೆ. ಆದರೆ ಧರ್ಮಪ್ರಚಾರಕ್ಕೆ ಮಾತ್ರ ಇದು ಸೀಮಿತವಾಗಿಲ್ಲ.

ಆದರೆ ಹಿಂದುಗಳನ್ನು ಮೋಸದಿಂದ, ಆಮಿಷದಿಂದ ಮತಾಂತರ ಮಾಡುತ್ತಿದ್ದೀರಿ. ಇದರ ಹಿಂದೆ ಮತಾಂತರದ ಉದ್ದೇಶವಿದೆ ಎಂದು ಪ್ರಮೋದ್ ಮುತಾಲಿಕ್ ಆಪಾದಿಸಿದ್ದಾರೆ. ಬೆನ್ನಿಹಿನ್ ಕರ್ನಾಟಕದ ನೆಲದಲ್ಲಿ ಕಾಲಿಡಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಮುತಾಲಿಕ್ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ