‘ಶೋಭಾ ವಿಚಾರವನ್ನು ನೋಡುವುದನ್ನೇ ಬಿಟ್ಟಿದ್ದೇನೆ’

ಬುಧವಾರ, 19 ಜುಲೈ 2017 (12:36 IST)
ಬೆಂಗಳೂರು: ಕೋಮುಗಲಭೆಯಿಂದ ಸಾವನ್ನಪ್ಪಿದ ಹಿಂದೂ ಕಾರ್ಯಕರ್ತರ ಹೆಸರನ್ನು ಕೇಂದ್ರ ಗೃಹ ಖಾತೆಗೆ ಕಳುಹಿಸುವಾಗ ಬದುಕಿರುವ ವ್ಯಕ್ತಿಯನ್ನು ಸತ್ತಿದ್ದಾರೆಂದು ಪಟ್ಟಿ ನೀಡಿದ ಶೋಭಾ ಕರಂದ್ಲಾಜೆ ಇದೀಗ ನಗೆ ಪಾಟಲಿಗೀಡಾಗಿದ್ದಾರೆ.


ಈ ಬಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ‘ಶೋಭಾ ವಿಚಾರವನ್ನು ನೋಡವುದನ್ನೇ ಬಿಟ್ಟಿದ್ದೇನೆ’ ಎಂದು ಉಡಾಫೆ ಮಾಡಿದ್ದಾರೆ.

ತಮ್ಮ ಎಡವಟ್ಟು ಅರಿವಾಗುತ್ತಿದ್ದಂತೆ ಅತ್ತ ಶೋಭಾ ಕರಂದ್ಲಾಜೆ ಕಣ್ತಪ್ಪಿನಿಂದಾದ ತಪ್ಪು ಎಂದು ಕ್ಷಮೆಯಾಚಿಸಿದ್ದಾರೆ. ಆದರೆ ಆಡಳಿತಾರೂಢ ಕಾಂಗ್ರೆಸ್ ಇದು ಬಿಜೆಪಿಯವರ ಸಂಸ್ಕೃತಿ ಎಂದು ಜರೆದಿದೆ.

ಇದನ್ನೂ ಓದಿ..  ಮಾತಲ್ಲಿ ದ್ರಾವಿಡ್ ಗೆ ಜೈಕಾರ ಹಾಕಿ ಸಚಿನ್ ಬೇಕು ಎಂದರಾ ರವಿ ಶಾಸ್ತ್ರಿ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ