ಯಾರಾಗ್ತಾರೆ ಬೆಂಗಳೂರಿನ ಉಪಮೇಯರ್ ಎಂಬ ಪ್ರೆಶ್ನೆಗೆ ಉತ್ತರ ಸಿಕ್ಕಿದೆ. ಬಿಜೆಪಿಯ ’ಕಟ್ಟೆ’ ಸತ್ಯನಾರಾಯಣರವರು ಬಿಬಿಎಂಪಿ ಮೇಯರ್ ಆಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ನ ಇಂದಿರಾರವರಿಗೆ ಉಪಮೇಯರ್ ಹುದ್ದೆ ಒಲಿದಿದೆ.
ಮೇಯರ್ ವೆಂಕಟೇಶ್ ಮೂರ್ತಿಯವರ ಅಧಿಕಾರಾವಧಿ ಮುಕ್ತಾಯಗೊಂಡ ನಂತರ ಆ ಹುದ್ದೆಗೆ ಯಾರು ಆಯ್ಕೆಯಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಕಟ್ಟೆ ಸತ್ಯನಾರಾಯಣ ಅವರ ಹೆಸರನಬ್ನು ಮೇಯರ್ ಅಭ್ಯರ್ಥಿಯಾಗಿ ಘೋಷಿಸಿದ್ದರು. ಆದ್ರೆ ಇದೀಗ ಅವರ ಹೆಸರೇ ಅಂತಿಮವಾಗಿದೆ. ಬಸವನಗುಡಿ ಕ್ಷೇತ್ರದಿಂದ ಸತತ ನಾಲ್ಕುಬಾರಿ ಆಯ್ಕೆಯಾಗಿರುವ ಕಟ್ಟೆ ಸತ್ಯಾನಾರಯಣರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ಉಪಮೇಯರ್ ಹುದ್ದೆಗೆ ಬ್ಯಾಟರಾಯನಪುರದ 7 ನೇ ನಂಬರ್ ವಾರ್ಡನ ಕಾಂಗ್ರೆಸ್ ಸದಸ್ಯೆ ಇಂದಿರಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.