"ಅಕ್ರಮ ಗಣಿಗಾರಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ" ಎಂದರು ಸಿದ್ದರಾಮಯ್ಯ

ಸೋಮವಾರ, 30 ಸೆಪ್ಟಂಬರ್ 2013 (17:36 IST)
PR
PR
ಬೆಂಗಳೂರು:ಈಗಲೂ ಕೂಡ ಅಕ್ರಮ ಗಣಿಗಾರಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಇಂದು ನೆರೆದಿದ್ದ ಪತ್ರಕರ್ತರಿಗೆ ಅಚ್ಚರಿ ಮೂಡಿಸಿದ ಸಂಗತಿ ವರದಿಯಾಗಿದೆ. ಸಚಿವ ನಂತೋಷ್ ಲಾಡ್ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಕ್ಕೆ ದಾಖಲೆಗಳನ್ನು ಹಾಜರುಪಡಿಸಿದರೆ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾ, ಈಗಲೂ ಅಕ್ರಮ ಗಣಿಗಾರಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಬಾಯಿತಪ್ಪಿ ಹೇಳಿದರು.

ಮುಖ್ಯಮಂತ್ರಿಯ ಎಡವಟ್ಟಿನ ಬಗ್ಗೆ ಮಾಧ್ಯಮದವರು ಗಮನ ಸೆಳೆದ ಮೇಲೆ ತಪ್ಪಿನ ಅರಿವಾಗಿ ತಮ್ಮ ತಪ್ಪನ್ನು ತಿದ್ದಿಕೊಂಡರು. ಅಕ್ರಮ ಗಣಿಗಾರಿಕೆಗೆ ನಮ್ಮ ಬೆಂಬಲವಿಲ್ಲ, ಅಕ್ರಮ ಗಣಿಗಾರಿಕೆಗೆ ನಮ್ಮ ಬೆಂಬಲವಿಲ್ಲ ಎಂದು ಎರಡೆರಡು ಬಾರಿ ಪುನರುಚ್ಚರಿಸಿದರು.

ವೆಬ್ದುನಿಯಾವನ್ನು ಓದಿ