ಅಕ್ರಮ ಗಣಿಗಾರಿಕೆಯಿಂದ ಸೀಮಂತ್‌ಕುಮಾರ್ ಸಿಂಗ್‌ಗೆ 20 ಲಕ್ಷ ರೂ ಲಂಚ; ಹಿರೇಮಠ್

ಮಂಗಳವಾರ, 29 ಅಕ್ಟೋಬರ್ 2013 (15:01 IST)
PR
ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅಕ್ರಮ ಗಣಿಗಾರಿಕೆದಾರರಿಂದ 20 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್.,ಹಿರೇಮಠ್ ಆರೋಪಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಕಂಪೆನಿಗಳು ಅದಿರು ರಫ್ತು ಸಾಗಾಣಿಕೆಗಾಗಿ ಎಸ್‌.ಪಿ. ಸೀಮಂತ್ ಕುಮಾರ್ ಸಿಂಗ್ ಅವರಿಗೆ 20 ಲಕ್ಷ ರೂಪಾಯಿ ಲಂಚ ನೀಡಿದ್ದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ದಾಖಲೆಗಳು ದೊರೆತಿವೆ ಎಂದು ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ರೂವಾರಿಗಳಾದ ರೆಡ್ಡಿ ಬ್ರದರ್ಸ್, ಲಾಡ್ ಮತ್ತು ಇತರ ಕಂಪೆನಿಗಳ ಮಾಲೀಕರು ಮಾಸಿಕವಾಗಿ ಸೀಮಂತ್ ಕುಮಾರ್ ಅವರಿಗೆ ಲಂಚ ನೀಡುತ್ತಿದ್ದರು ಎಂದು ಹಿರೇಮಠ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ