ಅನೈತಿಕ ಸಂಬಂಧ: ಪತ್ನಿಯ ಪ್ರೇಮಿಯ ಕೊಲೆ ಆರೋಪಿ ಬಂಧನ

ಮಂಗಳವಾರ, 21 ಫೆಬ್ರವರಿ 2012 (10:10 IST)
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಶಿವನಾಯ್ಕ ತನ್ನ ಪತ್ನಿಯಾದ ಮಾಲಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ರಮೇಶ್ ಎಂಬ ಆಟೋ ಚಾಲಕನನ್ನು ಭಾನುವಾರ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ತಪ್ಪೆಂದು ಹಲವು ಬಾರಿ ರಮೇಶನಿಗೆ ಹೇಳಿದ್ದರೂ ಕೇಳದೇ, ಅನೈತಿಕ ಸಂಬಂಧವನ್ನು ಮುಂದುವರಿಸಿದ ರಮೇಶನನ್ನು ಘಂಟ್ಯಾಪುರ-ತರಗನಹಳ್ಳಿ ಮಾರ್ಗ ಮದ್ಯೆದಲ್ಲಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ಆರೋಪಿ ಶಿವ ನಾಯ್ಕ ಒಪ್ಪಿಕೊಂಡಿದ್ದಾನೆ.

ಕೊಲೆ ಮಾಡಿದ ನಂತರ ತಲೆಮರೆಸಿಕೊಳ್ಳಲು ಯತ್ನಿಸಿದ್ದ ಶಿವ ನಾಯ್ಕನನ್ನು ಹರಿಹರ ತಾಲೂಕಿನ ಕೊಮಾರನಹಳ್ಳಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಬಳಿ ಪೊಲೀಸ್ ವಾಹನವನ್ನು ಕಂಡು ಓಡಲು ಯತ್ನಿಸಿದ ಶಿವನಾಯ್ಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕೊಲೆ ಸಂಭವಿಸಿ ಕೇವಲ 11 ಗಂಟೆಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿದ ಪೊಲೀಸ್ ಸಿಬ್ಬಂದಿಯ ಕಾರ್ಯಚರಣೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ವೆಬ್ದುನಿಯಾವನ್ನು ಓದಿ