ಅಬಕಾರಿ ಇಲಾಖೆಯಲ್ಲಿ ಲಂಚಬಾಕ ಅಧಿಕಾರಿ ಬೇಡ: ಸತೀಶ್ ರೆಡ್ಡಿ

ಸೋಮವಾರ, 24 ಫೆಬ್ರವರಿ 2014 (15:20 IST)
PR
PR
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಲಂಚಬಾಕ ಅಧಿಕಾರಿ ಮಂಜುನಾಥ್ ಬೇಡ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬೆಂಗಳೂರು ನಗರ ಡಿ.ಸಿ. ಡಾ.ಪ್ರಕಾಶ್‌ಗೆ ಒತ್ತಾಯಿಸಿದ್ದಾರೆ. ಕರ್ನಾಟಕ ಮದ್ಯಮಾರಾಟಗಾರರ ಸಂಘ ಇವರಿಗೆ ಸಾಥ್ ನೀಡಿದೆ. ಲಂಚಬಾಕ ಅಬ್ಕಾರಿ ಡಿಸಿ ಡಾ.ವೈ.ಮಂಜುನಾಥ್ ಬಗ್ಗೆ ಟಿವಿವಾಹಿನಿಯೊಂದರಲ್ಲಿ ಎಳೆಎಳೆಯಾಗಿ ವರದಿ ಪ್ರಸಾರವಾಗಿತ್ತು. ಅಬ್ಕಾರಿ ಇಲಾಖೆಯಲ್ಲಿ ಒಳ್ಳೆ ಅಧಿಕಾರಿಗಳು ಇದ್ದರೂ ಕೆಲವು ಕೆಟ್ಟ ಹುಳುಗಳು ಸೇರಿವೆ. ಅವರ ಕಚೇರಿಯೊಳಗೆ ಹೋದರೆ ಮೊಬೈಲ್ ಕಿತ್ತಿಟ್ಟುಕೊಳ್ಳುವುದು ಮುಂತಾದ ನಡವಳಿಕೆ ತೋರಿಸುತ್ತಾರೆ.

ಸಾವಿರಾರು ರೂಪಾಯಿ ಲಂಚ ವಸೂಲಿ ಮಾಡ್ತಾರೆ. ಬಾರ್‌ ಮಾಲೀಕರಿಗೆ, ಸಾರ್ವಜನಿಕರಿಗೆ ತೊಂದರೆ ಕೊಡುವ ಇಂತಹ ಅಧಿಕಾರಿಯನ್ನು ತಕ್ಷಣವೇ ಅಮಾನತಿನಲ್ಲಿಟ್ಟು ಅವರ ವಿರುದ್ಧ ತನಿಖೆ ನಡೆಸುವಂತೆ ಆದೇಶ ಮಾಡಬೇಕು. ಒಂದು ಕಡೆ ಕಿರುಕುಳ, ಇನ್ನೊಂದು ಕಡೆ ಶೇ. 5.5 ವ್ಯಾಟ್‌ನಿಂದ ಮದ್ಯಮಾರಾಟಗಾರರು ಬೇಸತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ