ಅರೆಬೆತ್ತಲೆಯಲ್ಲಿ ಮೊಬೈಲ್ ಅಂಗಡಿ ಕಳ್ಳತನ: ಸಿಸಿಟಿವಿಯಲ್ಲಿ ಸೆರೆಯಾದ!

ಬುಧವಾರ, 4 ಡಿಸೆಂಬರ್ 2013 (16:46 IST)
PR
PR
ಚಿಕ್ಕಮಗಳೂರು: ಚಿಕ್ಕಮಗಳೂರಿನ ಆಲ್ದೂರು ತಾಲೂಕಿನಲ್ಲಿ ಆರ್ಯ ಡಿಜಿಟಲ್ ಮೊಬೈಲ್ ಅಂಗಡಿಗೆ ಕನ್ನ ಹಾಕಿದ ಖದೀಮ ಅರೆಬೆತ್ತಲೆಯಾಗಿ ಕೈಚಳಕ ತೋರಿಸಿ ಹಣ, ಮೊಬೈಲ್ ದೋಚಿ ಪರಾರಿಯಾಗಿರುವುದನ್ನು ಸಿಸಿಟಿವಿ ಕ್ಯಾಮೆರಾ ತೋರಿಸಿದೆ. ಅಲ್ಲಿ ಸಿಸಿಟಿವಿ ಇರುವುದನ್ನು ಗಮನಿಸದೇ ಅವನು ತನ್ನ ಕೈಚಳಕವನ್ನು ತೋರಿಸಿದ. ಅವನು ಕೇವಲ ಚಡ್ಡಿಯಲ್ಲಿ ಬಂದು ಮೊಬೈಲ್ ಅಂಗಡಿ ಕಳ್ಳತನ ಮಾಡಿರುವುದು ಆಶ್ಚರ್ಯ ಮೂಡಿಸಿದೆ.

ಅಂಗಡಿಯ ಮೇಲ್ಛಾವಣಿಯನ್ನು ತೆಗೆದು ಮಧ್ಯರಾತ್ರಿ ಕಳ್ಳತನ ಮಾಡಿದ್ದಾನೆ. 6 ಸಾವಿರ ರೂ. ನಗದು, ಬೆಲೆಬಾಳುವ ಮೊಬೈಲ್‌ಗಳನ್ನು ಕಳ್ಳ ದೋಚಿದ್ದಾನೆ. ಇವನನ್ನು ಪತ್ತೆ ಹಚ್ಚಲು ಒಂದು ತಂಡವನ್ನು ಕೂಡ ರಚನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ