ಇಂದು ನಟ, ನಿರ್ದೇಶಕ ಸಿ ಆರ್ ಸಿಂಹ ರ ಅಂತ್ಯಸಂಸ್ಕಾರ

ಶನಿವಾರ, 1 ಮಾರ್ಚ್ 2014 (10:27 IST)
PR
ಬನಶಂಕರಿಯ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ನಾಟಕರಂಗದ ತುಘಲಕ್ ನಟ, ನಿರ್ದೇಶಕ, ರಂಗಕರ್ಮಿ ಸಿ ಆರ್ ಸಿಂಹ ರವರ ಅಂತ್ಯಸಂಸ್ಕಾರ ಇಂದು ಸಂಜೆ ಬನಶಂಕರಿಯ ಶವಾಗಾರ ದಲ್ಲಿ ನಡೆಯಲಿದೆ.

ಮುಂಜಾನೆಯಿಂದ ಬನಶಂಕರಿಯ ಹೊಸಕೇರಿಹಳ್ಳಿಯಲ್ಲಿರುವ ಸ್ವಗೃಹ ಗುಹೆಯಲ್ಲಿ ಸಿಂಹರ ಪಾರ್ಥಿವ ಶರೀರಕ್ಕೆ ವಿಧಿವಿಧಾನಗಳನ್ನು ಪೂರೈಸಲಾಯಿತು. 10 ಗಂಟೆಯಿಂದ ಸಂಜೆಯವರೆಗೆ ಅವರ ದೇಹವನ್ನು ರವೀಂದ್ರ ಕಲಾಕ್ಷೇತ್ರದ 'ಸಂಸ ಬಯಲು' ರಂಗಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸಂಜೆ 5.30 ರ ಸುಮಾರಿಗೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನಿನ್ನೆಯಿಂದ ಅವರ ಮನೆಗೆ ಬಂದು ಅಂತಿಮ ದರ್ಶನ ಪಡೆದ ಅಭಿಮಾನಿಗಳು ನಟನಾ ಚತುರನನ್ನು ನೆನೆದು ಕಣ್ಣೀರು ಹಾಕಿದರು.

ವೆಬ್ದುನಿಯಾವನ್ನು ಓದಿ