ಇಂದು ವರನಟ ಡಾ. ರಾಜ್‌ಕುಮಾರ್ ಪುಣ್ಯ ತಿಥಿ ಸ್ಮರಣೆ

ಶುಕ್ರವಾರ, 12 ಏಪ್ರಿಲ್ 2013 (09:26 IST)
PR
PR
ವರನಟ ಡಾ. ರಾಜ್‌ಕುಮಾರ್‌ರವರ 7 ನೇ ಪುಣ್ಯ ತಿಥಿ ಸ್ಮರಣೆ ಕಾರ್ಯಕ್ರಮವು ಇಂದು ನಡೆಯುತ್ತಿದ್ದು, ಡಾ. ರಾಜ್ ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಬೆಳಿಗ್ಗೆಯಿಂದಲೂ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿ ತಮ್ಮ ನೆಚ್ಚಿನ ನಟನ ಸ್ಮರಣೆ ಮಾಡುತ್ತಿದ್ದಾರೆ.

ಡಾ. ರಾಜ್ ಸಮಾಧಿ ಇರುವ ಸ್ಥಳದ ಸುತ್ತ ಈಗ ಉದ್ಯಾನವನ ನಿರ್ಮಿಸಲಾಗಿದ್ದು, ಡಾ. ರಾಜ್ ಕುಮಾರ್‌ರವರ ಪುತ್ಥಳಿಯನ್ನು ಸಹ ಆನಾವರಣ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದ್ದು, ಡಾ. ರಾಜ್ ಕುಮಾರ್‌ರವರು ಹಾಡಿರುವ ಚಿತ್ರಗಳ ಹಾಡುಗಳು ಕೇಳಿ ಬರುತ್ತಿವೆ.

ಡಾ. ರಾಜ್‌ಕುಮಾರ್‌ರವರ ಪತ್ನಿ ಪಾರ್ವತಮ್ಮ, ಪುತ್ರರುಗಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕುಟುಂಬ ವರ್ಗದ ಎಲ್ಲಾ ಸದಸ್ಯರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪೂಜೆ ಸಲ್ಲಿಸಲಿದ್ದು, ನಂತರ ಅನ್ನ ಸಂತರ್ಪಣೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ