ಉರುಳಿ ಬಿದ್ದ ಮರದಲ್ಲಿದ್ದಾರೆ ಬ್ರಹ್ಮ, ವಿಷ್ಣು ಮಹೇಶ್ವರ..!

ಶುಕ್ರವಾರ, 25 ಅಕ್ಟೋಬರ್ 2013 (12:08 IST)
PR
PR
ಮಳೆಯ ಆರ್ಭಟಕ್ಕೆ ನಲುಗಿ ಉರುಳಿ ಬಿದ್ದ ಆ ಮರದಲ್ಲಿ ದೇವರಿದ್ದಾರೆ. ಬ್ರಹ್ಮ ವಿಷ್ಣು ಮಹೇಶ್ವರರು ಆ ಮರದಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ. ಹೀಗಾಗಿ ಆ ಮರ ಉರುಳಿ ಬಿದ್ದ ಮಾತ್ರಕ್ಕೆ ದೇವರನ್ನು ಕಿತ್ತೊಗೆಯಲು ಸಾಧ್ಯವಿಲ್ಲ ಎಂದು ಭಾವಪರವಶರಾಗಿ ಮಾತನಾಡುತ್ತಾರೆ ಅಲ್ಲಿನ ಸ್ಥಳೀಯರೊಬ್ಬರು.

ಕೆಲ ದಿನಗಳ ಹಿಂದೆ ಗೌರಿಬಿದನೂರಿನ ವಿದುರಾಶ್ವಥದಲ್ಲಿ ಅರಳಿ ಮರವೊಂದು ಧರೆಗೆ ಉರುಳಿಬಿದ್ದಿತ್ತು. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿದ್ದರಿಂದ ಹಳೇಯ ಐತಿಹಾಸಿಕ ಮರ ಉರುಳಿ ಬಿದ್ದಿತ್ತು. ಆದ್ರೆ ಉರುಳಿಬಿದ್ದ ಮರವನ್ನು ಏಕೆ ತೆರವುಗೊಳಿಸಿಲ್ಲ ಎಂದು ವಿಚಾರಿಸಿದಾಗ ಭಕ್ತಾದಿಗಳು ಈ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ತಿಳಿಸಿದ್ರು.

ಈ ಮರ ಐತಿಹಾಸಿಕ ಮರ. ವಿದುರ ನೆಟ್ಟ ಮರ ಇದಾಗಿದೆ. ಹೀಗಾಗಿ ಈ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ಈಗಲೂ ವಾಸಿಸುತ್ತಿದ್ದಾರೆ. ಹೀಗಾಗಿ ಮರವನ್ನು ತೆರವುಗೊಳಿಸಲು ನಾವು ಬಿಡುವುದಿಲ್ಲ ಎಂದು ಸ್ಥಳೀಯರು ಹೇಳಿದ್ರು. ಭಕ್ತರ ಮನಸ್ಸಿಗೆ ನೋವು ಉಂಟು ಮಾಡಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಕೂಡ ಸುಮ್ಮನಾಗಿಬಿಟ್ಟಿದೆ.

ವೆಬ್ದುನಿಯಾವನ್ನು ಓದಿ