ಎಟಿಎಂನಲ್ಲಿ ಹಲ್ಲೆ: ಹಿಂದೂಪುರದಲ್ಲಿ ಮೊಬೈಲ್ ಮಾರಿದ ದುಷ್ಕರ್ಮಿ

ಗುರುವಾರ, 21 ನವೆಂಬರ್ 2013 (11:47 IST)
PR
PR
ಬೆಂಗಳೂರು: ಎಟಿಎಂನಲ್ಲಿ ಜ್ಯೋತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿ ಅನಂತಪುರ ಜಿಲ್ಲೆ ಹಿಂದೂಪುರದ ಮಾರ್ವೆಲ್ಸ್ ಕಂಪನಿ ಅಂಗಡಿ ಮಾಲೀಕ ಅಬೂಸರ್ ಎಂಬವನಿಗಜ್ಯೋತಿಯಿಂದ ಪಡೆದಿದ್ದ ಮೊಬೈಲ್ ಮಾರಿದ್ದಾನೆ. ನಿನ್ನೆ ಅಬೂಸರ್‌ಗೆ ಅವನು ಮೊಬೈಲ್ ಮಾರಿದ್ದು, ಅಬೂಸರ್‌ನಿಂದ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಹಿಂದೂಪುರದಲ್ಲಿರುವ ಎಲ್ಲ ಲಾಡ್ಜ್‌ಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.

ಘಟನೆ ನಡೆದ ಮೂರು ಗಂಟೆಯೊಳಗೆ ಆರೋಪಿ ಹಿಂದುಪುರ ತಲುಪಿದ್ದಾನೆಂದು ತಿಳಿದುಬಂದಿದೆ. ಆರೋಪಿ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಿಸಿದೆ. ಆರೋಪಿ ಕಂಡರೆ ತಕ್ಷಣ ಕೆಳಗಿನ ನಂಬರ್‌ಗಳಿಗೆ ಕರೆ ಮಾಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ