ಏಪ್ರಿಲ್ 14ರಂದು ಅಂಬರೀಷ್‌ಗೆ ಮಂಡ್ಯದಲ್ಲಿ ಅದ್ಧೂರಿ ಸ್ವಾಗತ

ಶನಿವಾರ, 5 ಏಪ್ರಿಲ್ 2014 (10:23 IST)
PR
PR
ಬೆಂಗಳೂರು: ಏಪ್ರಿಲ್ 14ರಂದು ಅಂಬರೀಷ್ ಮಂಡ್ಯಕ್ಕೆ ಆಗಮಿಸಲಿದ್ದಾರೆಂದು ಅಮರಾವತಿ ಚಂದ್ರಶೇಖರ್ ಹೇಳಿದ್ದಾರೆ. ಮಂಡ್ಯದಲ್ಲಿ ಅಂಬರೀಷ್ ಸ್ವಾಗತಕ್ಕೆ ಭರ್ಜರಿ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ ಸಂಸದೆ ರಮ್ಯಾ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ನಾಯಕರು ಅಂಬರೀಷ್ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಯೋಜನೆ ಹಾಕಿದ್ದಾರೆ.

ಸದ್ಯ ಅಂಬಿ ಮಲೇಷ್ಯಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.ಅಂಬರೀಷ್ ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಬರುತ್ತಿರುವುದರಿಂದ ಅಂಬಿ ಅಭಿಮಾನಿಗಳು, ಕಾರ್ಯಕರ್ತರು ಸಡಗರ,ಸಂಭ್ರಮದಿಂದ ಇದ್ದಾರೆ.

ವೆಬ್ದುನಿಯಾವನ್ನು ಓದಿ