ಒಳಬಂದರೆ ರಾಜಕೀಯದ ಗರ್ಭಗುಡಿ ಅರ್ಥವಾಗ್ತದೆ: ಹಿರೇಮಠ್‌ಗೆ ಡಿಕೆಶಿ ಸವಾಲು

ಗುರುವಾರ, 16 ಜನವರಿ 2014 (18:22 IST)
PR
PR
ಹಿರೇಮಠ್ ರಾಜಕೀಯಕ್ಕೆ ಬರುವುದಾದರೆ ಸ್ವಾಗತ ಎಂದು ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜಕೀಯದ ಒಳಬಂದರೆ ರಾಜಕೀಯದ ಗರ್ಭಗುಡಿ ಅರ್ಥವಾಗುತ್ತದೆ ಎಂದು ಶಿವಕುಮಾರ್ ಹೇಳಿದರು. ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಎಸ್. ಆರ್. ಹಿರೇಮಠ್ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾನು 36 ವರ್ಷ ವಯಸ್ಸಿನಿಂದ ರಾಜಕೀಯದಲ್ಲಿದ್ದೇನೆ ಎಂದು ಹೇಳಿದರು.

ನನ್ನ ರಾಜಕೀಯ ಬಡಜನರ ರಾಜಕೀಯ. ಯಾರು ಅವ್ಯವಹಾರ ಮಾಡ್ತಿದ್ದಾರೆ, ಯಾರು ಸಾರ್ವಜನಿಕ ಹಣ ಕೊಳ್ಳೆ ಹೊಡೀತಾರೆ ಅವರನ್ನು ರಾಜಕೀಯದಿಂದ ಅಟ್ಟುವುದು ನನ್ನ ಕೆಲಸ ಎಂದು ಹಿರೇಮಠ್ ಹೇಳಿದ್ದಾರೆ. ನನ್ನ ಉದ್ದೇಶ ರಾಜಕೀಯದಲ್ಲಿ ಬದಲಾವಣೆ ತರುವುದಾಗಿದೆ ಎಂದೂ ಹಿರೇಮಠ್ ಹೇಳಿದರು.

ವೆಬ್ದುನಿಯಾವನ್ನು ಓದಿ