ಕಣ್ಣೀರಿಟ್ಟ ಹಿರಿಯ ನಟಿ : ’ನನಗೆ ಉಡಲು ಸೀರೆ ಇಲ್ಲ’ ಸೀರೆ ಕೊಡಿಸುವಂತೆ ಸಿಎಂಗೆ ಮನವಿ.

ಮಂಗಳವಾರ, 22 ಅಕ್ಟೋಬರ್ 2013 (11:27 IST)
PR
PR
ಒಂದಾನೊಂದು ಕಾಲದಲ್ಲಿ ಕನ್ನಡ ಸಿನೆಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ ಕನ್ನಡದ ಧೀಮಂತ ಹಿರಿಯ ನಟಿಗೆ ಇಂದು ಉಡಲು ಸೀರೆಯೇ ಇಲ್ಲ..!! ನನಗೆ ಉಡಲು ಸೀರೆ ಕೊಡಿಸಿ. ಸ್ನಾನ ಮಾಡಲು ಒಂದು ಬಕೇಟ್ ಕೊಡಿಸಿ ಎಂದು ತಮ್ಮ ಆರ್ಥಿಕ ಸ್ಥಿತಿಯನ್ನು ಸಿಎಂ ಸಿದ್ರಾಮಯ್ಯನವರ ಎದುರಲ್ಲಿ ಅನಾವರಣವನ್ನು ಮಾಡಿದ್ರು ಹಿರಿಯ ನಟಿ.

ಕನ್ನಡದ ಖ್ಯಾತ ನಟಿ, ರಂಗ ಕಲಾವಿದೆಯಾದ ಶಾಂತಮ್ಮನವರು ಇಂದು ಸಿಎಂ ಸಿದ್ರಾಮಯ್ಯನವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿ ಕೊಂಡರು. ಸಿಎಂ ಗೃಹ ಕಛೇರಿ ಕೃಷ್ಣಾದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನದ ವೇಳೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ನಟಿ ಸಿಎಂ ಎದುರಲ್ಲಿ ಕಣ್ಣೀರು ಹಾಕಿದ್ರು.

"ನನಗೆ ಉಡಲು ಒಂದು ಸೀರೆ ಕೊಡಿಸಿ.. ನಾನು ವೃದ್ದಾಶ್ರಮದಲ್ಲಿ ಇದ್ದೀನಿ,.. ಸ್ನಾನ ಮಾಡಲು ಒಂದೇ ಒಂದು ಬಕೇಟು ಕೊಡಿಸಿ. ನನ್ನ ಮಕ್ಕಳಿಗೆ ಕ್ಯಾನ್ಸರ‍್ ಇದೆ... ದಯಮಾಡಿ ಅವರ ಚಿಕಿತ್ಸೆಯನ್ನು ಭರಿಸಲು ಸರ್ಕಾರ ಸಹಾಯ ಮಾಡಿಕೊಡಬೇಕು" ಎಂದು ಮನವಿ ಮಾಡಿದ್ರು.

ಬಣ್ಣದ ಲೋಕದಲ್ಲಿ ರಾರಾಜಿಸಿದ್ದ 82 ವರ್ಷದ ನಟಿ ಶಾಂತಮ್ಮನವರು ಇಂದು ಉಡಲು ಸೀರೆಯೂ ಇಲ್ಲದೇ ಕಣ್ಣೀರು ಹಾಕಿದ ಕ್ಷಣ ನಿಜಕ್ಕೂ ಹೃದಯ ಕಿತ್ತು ಬರುವಂತಿತ್ತು..

ವೆಬ್ದುನಿಯಾವನ್ನು ಓದಿ