ಕನ್ನಡ ರಾಜ್ಯೋತ್ಸವಕ್ಕೆ ಕಲಾವಿದರ ಗೈರು: ಅಂಬಿ ಕಿಡಿ

ಸೋಮವಾರ, 14 ಡಿಸೆಂಬರ್ 2009 (14:50 IST)
NRB
ಕರ್ನಾಟಕ ಕಲಾವಿದರ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಿತ್ರ ಕಲಾವಿದರೇ ಗೈರು ಹಾಜರಾದಬಗ್ಗೆ ಹಿರಿಯ ನಟ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಜೆ.ಪಿ ನಗರದಲ್ಲಿ ಕಲಾವಿದರ ಸಂಘ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಮಾರಂಭಕ್ಕೆ ಆಗಮಿಸುವಂತೆ ಕನ್ನಡದ ಮೇರು ನಟರಾದ ವಿಷ್ಣುವರ್ಧನ್, ಶಿವರಾಜ್ ಕುಮಾರ್, ರವಿಚಂದ್ರನ್, ಸುದೀಪ್, ದರ್ಶನ್ ಸೇರಿದಂತೆ ಪ್ರತಿಯೊಬ್ಬ ಕಲಾವಿದರಿಗೂ ಆಹ್ವಾನ ಕಳುಹಿಸಲಾಗಿತ್ತು.

ಆದರೆ, ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾಗಿರುವ ಅಂಬರೀಶ್ ಬಿಟ್ಟರೆ ಉಳಿದ ಯಾವ ಕಲಾವಿದರೂ ಆಗಮಿಸಿರಲಿಲ್ಲ.ಇಂತಹ ಕಾರ್ಯಕ್ರಮಗಳಿಗೆ ಕಲಾವಿದರೇ ಆಗಮಿಸದಿದ್ದರೆ ಇನ್ನಾರಿಗಾಗಿ ಇಂತಹ ಸಮಾರಂಭ ಮಾಡಬೇಕು. ನಿರೀಕ್ಷೆಯಂತೆ ಗಣ್ಯರು, ಆಹ್ವಾನಿತರು ಬರದೇ ಇದ್ದರೆ ಇಂತಹ ಕಾರ್ಯಕ್ರಮಗಳನ್ನು ಮಾಡುವುದೇ ಬೇಡ ಎಂದು ಅಂಬರೀಶ್ ಆಕ್ರೋಶ ವ್ಯಕ್ತ ಪಡಿಸಿದರು.

ರಾಜ್ಯೋತ್ಸವ ಕಾರ್ಯಕ್ರಮ ನವೆಂಬರ್ ಒಂದರಂದೇ ಆಯೋಜಿಸಲಾಗಿತ್ತು. ಆದರೆ, ಅಂದು ಡಾ.ರಾಜ್ ಅವರ ಅಂಚೆ ಚೀಟಿ ಬಿಡುಗಡೆ ಸಮಾರಂಭ ಇದ್ದುದರಿಂದ ಡಿಸೆಂಬರ್ 13ಕ್ಕೆ ಮುಂದೂಡಲಾಗಿತ್ತು.

ವೆಬ್ದುನಿಯಾವನ್ನು ಓದಿ