ಕರ್ನಲ್ ವಸಂತ್ ಮನೆಗೆ ಜೆಜೆ ಸಿಂಗ್ ಭೇಟಿ

ಭಾನುವಾರ, 19 ಆಗಸ್ಟ್ 2007 (12:29 IST)
ಉಗ್ರರೊಂದಿಗಿನ ಹೋರಾಟದಲ್ಲಿ ಮಡಿದ ಕರ್ನಲ್ ವಸಂತ್ ಅವರ ಮನೆಗೆ ಶನಿವಾರ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ ಜೆ.ಜೆ.ಸಿಂಗ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದರು.

ತಮಗೆ ಯಾವರೀತಿಯ ಹೆಚ್ಚಿನ ಸಹಾಯ ಅಗತ್ಯವಿಲ್ಲ. ಉಗ್ರರನ್ನು ಕೊಲ್ಲುವ ಸಂದರ್ಭದಲ್ಲಿ ತಮ್ಮ ಪುತ್ರ ವೀರಮರಣವನ್ನಪ್ಪಿದ್ದಾನೆ ಅದಕ್ಕೆ ತಮಗೆ ಶೋಕವಿದ್ದರೂ ಉಗ್ರರನ್ನು ಕೊಂದಿದ್ದಕ್ಕೆ ತಾವು ಹೆಮ್ಮೆ ಪಡುತ್ತಿರುವುದಾಗಿ ವಸಂತ್ ಅವರ ತಂದೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ