ಕಳಂಕಿತರೆಂಬ ಶೆಟ್ಟರ್ ಪ್ರಸ್ತಾಪಕ್ಕೆ ಡಿಕೆಶಿ ಸವಾಲು

ಮಂಗಳವಾರ, 28 ಜನವರಿ 2014 (16:30 IST)
PR
PR
ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜಿ ಮಾಡಿಕೊಳ್ತಿದ್ದಾರೆ. ಸಮನ್ವಯ ಸಮಿತಿ ಸಭೆ ನಂತರ ಸಂಪೂರ್ಣ ಕುಸಿದುಹೋಗಿದ್ದಾರೆ. ಆಡಳಿತ ಯಂತ್ರವೂ ಕುಸಿದಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು. ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಬಹುಶಃ ಹೈಕಮಾಂಡ್ ಒತ್ತಡಕ್ಕೆ ಮಣಿದು ಸಂಪುಟಕ್ಕೆ ಸೇರಿಸಿಕೊಂಡಿರಬಹುದು ಎಂದು ರಾಜ್ಯಪಾಲದ ಭಾಷಣ ಕುರಿತು ಚರ್ಚೆ ವೇಳೆ ಶೆಟ್ಟರ್ ಹೇಳಿದರು.

ಕಳಂಕಿತರ ವಿಚಾರವನ್ನು ಕುರಿತು ಶೆಟ್ಟರ್ ಹೇಳಿದ್ದರಿಂದ ಕಳಂಕಿತರೆಂಬ ಹಣೆಪಟ್ಟಿ ಹೊತ್ತಿರುವ ಡಿ.ಕೆ. ಶಿವಕುಮಾರ್ ಸಿಡಿದೆದ್ದರು. ಕಳಂಕಿತರು ಎಂಬ ಶೆಟ್ಟರ್ ಉಲ್ಲೇಖಕ್ಕೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿದರು. ನಾನು ಚರ್ಚೆಗೆ ಸಿದ್ದ, ದಾಖಲೆ ಸಹಿತ ನೀವು ಬನ್ನಿ ಎಂದು ಡಿಕೆಶಿ ಸವಾಲು ಹಾಕಿದರು.

ವೆಬ್ದುನಿಯಾವನ್ನು ಓದಿ