ಕಾಂಗ್ರೆಸ್‌ನಲ್ಲಿ ಎರಡೆರಡು ಹುದ್ದೆಗೆ ಕತ್ತರಿ ಹಾಕಿದ ಪರಮೇಶ್ವರ್

ಮಂಗಳವಾರ, 24 ಡಿಸೆಂಬರ್ 2013 (15:14 IST)
PR
PR
ಬೆಂಗಳೂರು: ಪಕ್ಷ ಮತ್ತು ಸರ್ಕಾರದಲ್ಲಿ ಎರಡೆರಡು ಹುದ್ದೆ ಹೊಂದಿರುವವರಿಗೆ ಒಂದೇ ಹುದ್ದೆ ನೀಡುತ್ತೇವೆ ಎಂದು ಕೆಪಿಪಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ. ಇನ್ನೊಂದು ಹುದ್ದೆಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದೇವೆ. ಹೊಸ ವರ್ಷದಲ್ಲಿ ಹೊಸ ಹುದ್ದೆಯನ್ನು ವಹಿಸಿಕೊಳ್ಳುವ ಆಸೆ ಕೂಡ ತಮಗಿದೆ ಎಂದು ಪರಮೇಶ್ವರ್ ಹೇಳುವ ಮೂಲಕ ಸಚಿವ ಸ್ಥಾನದ ಬಯಕೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಮಂತ್ರಿ ಸ್ಥಾನವನ್ನು ಯಾರು ಹೊಂದಿದ್ದಾರೋ ಅವರು ಕೆಪಿಸಿಸಿ ಉಪಾಧ್ಯಕ್ಷ ಅಥವಾ ಜಿಲ್ಲಾಧ್ಯಕ್ಷ ಸ್ಥಾನ ಯಾವುದೇ ಆಗಿದ್ದರೂ ಅದನ್ನು ಬಿಟ್ಟುಕೊಡಬೇಕು ಎಂದು ಹೇಳಿದರು.

ಅಂಬರೀಶ್ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದಾರೆ, ದಿನೇಶ್ ಗುಂಡೂರಾವ್ ಜಿಲ್ಲಾಧ್ಯಕ್ಷರಾಗಿದ್ದಾರೆ. ಪರಮೇಶ್ವರ್ ಹೇಳಿಕೆ ಪ್ರಕಾರ ಈಗ ಅವರು ಈ ಸ್ಥಾನಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ದಿನೇಶ್ ಗುಂಡೂರಾವ್, ಅಂಬರೀಶ್ ಮಹದೇವಪ್ಪ, ಸೋಮಶೇಖರ್ ಮುಂತಾದವರು ಎರಡೆರಡು ಹುದ್ದೆಗಳನ್ನು ಅಲಂಕರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ