ಕಾಂಗ್ರೆಸ್ ಟಿಕೆಟ್ ಸಿಗದಿದ್ರೆ ನನ್ನ ವ್ಯಕ್ತಿತ್ವ ಹಾಳೋಗಲ್ಲ: ಪೂಜಾರಿ

ಮಂಗಳವಾರ, 28 ಜನವರಿ 2014 (17:54 IST)
PR
PR
ದಕ್ಷಿಣಕನ್ನಡ ಲೋಕಸಭಾ ಟಿಕೆಟ್ ವಿಚಾರವಾಗಿ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ಟಿಕೆಟ್ ನೀಡುವಂತೆ ನಾನು ಒತ್ತಡ ಹಾಕಿಲ್ಲ. ಟಿಕೆಟ್ ನೀಡುವಂತೆ ಎಐಸಿಸಿಗೆ ನಾನು ಅರ್ಜಿ ಹಾಕಿಲ್ಲ. ಟಿಕೆಟ್ ಸಿಗದಿದ್ದರೆ ನನ್ನ ವ್ಯಕ್ತಿತ್ವ ಹಾಳಾಗುವುದಿಲ್ಲ ಎಂದು ಉಡುಪಿಯಲ್ಲಿ ಮಾತನಾಡುತ್ತಾ ತಿಳಿಸಿದರು. ಅಭಿಪ್ರಾಯ ಸಂಗ್ರಹಿಸಿ ಲೋಕಸಭಾ ಟಿಕೆಟ್ ನೀಡಬೇಕೆಂದು ಅವರು ಹೇಳಿದರು. ಮುಖಂಡರನ್ನು ಕಾರ್ಯಕರ್ತನ್ನು ಕೇಳಿ ಟಿಕೆಟ್ ನೀಡಲಿ ಹೇಳಿದರು. ರಾಜ್ಯಸರ್ಕಾರ ಮಠಗಳ ವಿಚಾರಕ್ಕೆ ಕೈಹಾಕಬಾರದು.

ಸಿದ್ದರಾಮಯ್ಯ ಪ್ರಕಾಶ್ ಹುಕ್ಕೇರಿ ಕರೆಸಿ ಮಾತನಾಡಲಿ ಕೋಟ್ಯಂತರ ಭಕ್ತರಿಗೆ ದುಃಖ ಉಂಟುಮಾಡುವುದು ಬೇಡ ಎಂದೂ ಜನಾರ್ದನ ಪೂಜಾರಿ ಹೇಳಿದ್ದಾರೆ. ಹಿಂದು ಧಾರ್ಮಿಕ ದತ್ತಿ ಕಾಯ್ದೆ ಅಗತ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡ್ ಕೂಡ ಇದನ್ನು ಒಪ್ಪುವುದಿಲ್ಲ ಎಂದು ಪೂಜಾರಿ ಹೇಳಿದರು.

ವೆಬ್ದುನಿಯಾವನ್ನು ಓದಿ