ಕುಮಾರಸ್ವಾಮಿ ಮತ್ತೆ ಸಿಎಂ ಆಗಲು ದೇವರಲ್ಲಿ ಹರಕೆ: ಸಿಂಧ್ಯ

ಬುಧವಾರ, 25 ಏಪ್ರಿಲ್ 2012 (15:52 IST)
PR
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 20 ತಿಂಗಳ ಅವಧಿಯಲ್ಲಿ 5ರಿಂದ 10ವರ್ಷಗಳ ಕಾಲದಲ್ಲಿ ಮಾಡುವಂತಹ ಅಭಿವೃದ್ಧಿಕಾರ್ಯಗಳನ್ನು ಮಾಡಿ ಕ್ರಿಯಾಶೀಲ ನಾಯಕರಾಗಿದ್ದಾರೆ. ಮತ್ತೆ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಅಕ್ಷಯ ತೃತೀಯದಿನವಾದ್ದರಿಂದ ತಮ್ಮ ಮನೆ ದೇವರಲ್ಲಿ ಹರಕೆ ಮಾಡಿಕೊಳ್ಳುವುದಾಗಿ ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯ ತಿಳಿಸಿದರು.

ಕಸಬಾ ಹೋಬಳಿ ಆಡನಕುಪ್ಪೆ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರು ಬಡವರು, ದಲಿತರು ಎಲ್ಲಾ ಜನಾಂಗದ ಬೆಂಬಲವನ್ನು ಕೆಲಸದ ಮೂಲಕ ಪಡೆದವರಾಗಿದ್ದಾರೆ ಎಂದರು.

ರಾಮನಗರ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾಗಿದೆ. ಹಾಗಾಗಿ ಈಗಾಗಲೇ ಪಕ್ಷದಲ್ಲಿ ಅಭ್ಯರ್ಥಿಗಳನ್ನು ಸೂಚಿಸಿದ್ದು, ರಾಮನಗರದಲ್ಲಿ ಕುಮಾರಸ್ವಾಮಿ, ಮಾಗಡಿಯಲ್ಲಿ ಬಾಲಕೃಷ್ಣ, ಚನ್ನಪಟ್ಟಣ ಅಥವಾ ಕನಕಪುರದಲ್ಲಿ ತಾವು ಸ್ವರ್ಧೆ ಮಾಡಬೇಕೆಂಬ ತೀರ್ಮಾನವಾಗಿದೆ. ಇದು ಕುಮಾರಸ್ವಾಮಿ, ದೇವೇಗೌಡರ, ಹೆಚ್‌.ಡಿ. ರೇವಣ್ಣನವರ ಅಭಿಪ್ರಯವಷ್ಟೇ ಅಲ, ಕ್ಷೇತ್ರದಲ್ಲಿನ ಎಲ್ಲಾ ಮುಖಂಡರು ಸೇರಿ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಜೆಡಿ ಎಸ್‌ ಸರ್ಕಾರ ಮಾಡಿರುವ ಕೆಲಸಗಳೇ ಸಾಕ್ಷಿಭೂತವಾತಿ ನಿಂತಿವೆ. ಕಾರ್ಯಕರ್ತರು ತಲೆ ಎತ್ತಿ ನಿಲ್ಲಬಹುದಾಗಿದೆ. ನಾವು ಯಾರೂ ಸಹ ಜೈಲಗೆ ಹೋಗುವಂತಹ ಕೆಲಸಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ