'ಕೆಲವರಿಗೆ ಕಣ್ಣು ಕಾಣಲ್ಲ, ಕೆಲವರಿಗೆ ಕಿವಿ ಕೇಳಲ್ಲ, ಕೆಲವರಿಗೆ ಎದ್ದು ನಿಲ್ಲಲೂ ಆಗಲ್ಲ'

ಬುಧವಾರ, 1 ಜನವರಿ 2014 (15:16 IST)
PR
PR
ಬೆಂಗಳೂರು: ಐದು ಮಂದಿಯ ಸ್ಥಾನ ಖಾಲಿ ಇದೆ. ಸಾಕಷ್ಟು ಹಿರಿಯರು, ನಮ್ಮಂಥ ಅನೇಕ ಸಚಿವರು ಮಂತ್ರಿಯಾಗುವ ಆಕಾಂಕ್ಷೆ ಇಟ್ಟುಕೊಂಡಿದ್ದೀವಿ. ನಮ್ಮ ಮುಖ್ಯಮಂತ್ರಿ ಕೂಡ ಹೈಕಮಾಂಡ್ ಒತ್ತಡಕ್ಕೆ ಮಣಿದಿದ್ದಾರೆ ಎಂಬ ಭಾವನೆ ಉಂಟಾಗಿದೆ ಎಂದು ಸಚಿವ ಸ್ಥಾನ ಸಿಗದ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ. ಸರ್ಕಾರ ಭದ್ರವಾಗಿದ್ರೆ, ಲೋಕಸಭೆಯಲ್ಲಿ ಒಳ್ಳೆಯ ಸ್ಥಾನಗಳು ಸಿಗುತ್ತವೆ. ನಮ್ಮ ಮುಖ್ಯಮಂತ್ರಿ ಎಲ್ಲ ವಿಷಯಗಳನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆಂದು ಭಾವಿಸುತ್ತೇನೆ. ಚುನಾವಣೆಯಲ್ಲಿ ಗೆಲ್ಲಲಾಗದವರು ಸಚಿವ ಸಂಪುಟದಲ್ಲಿರುವುದು ದುರಂತ ಎಂದು ಸಚಿವ ಸ್ಥಾನ ಸಿಗದ ಗುತ್ತೇದಾರ್ ಹೇಳಿದ್ದಾರೆ.

ಮತ್ತೆ ಕೆಲವರಿಗೆ ಕಣ್ಣು ಕಾಣಲ್ಲ, ಕೆಲವರಿಗೆ ಕಿವಿ ಕೇಳಲ್ಲ, ಇನ್ನೂ ಕೆಲವು ಸಚಿವರಿಗೆ ಎದ್ದು ನಿಲ್ಲಲೂ ಆಗುವುದಿಲ್ಲ. ಅಂತರ ಸಚಿವರನ್ನು ಸಚಿವ ಸ್ಥಾನದಿಂದ ಕೈಬಿಡಿ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲಾಗದವರು ಸಂಪುಟದಲ್ಲಿರುವುದು ದುರಂತ ಎಂದು ಹೈಕಮಾಂಡ್ ವಿರುದ್ಧ ಮಾಲೀಕಯ್ಯ ಗುತ್ತೇದಾರ್ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ