ಕೊನೆಗೂ ಲೋಕಸಭೆಯಲ್ಲಿ ರಮ್ಯಾ ಚೊಚ್ಚಲ ಭಾಷಣವನ್ನು ಮಾಡಿದ್ರು

ಶನಿವಾರ, 22 ಫೆಬ್ರವರಿ 2014 (15:36 IST)
PR
PR
ಕನ್ನಡ ಚಿತ್ರನಟಿ ಸಂಸದೆ ರಮ್ಯಾ ಸದನದಲ್ಲಿ ತಾವು ಮಾತನಾಡುವ ಮುಂಚೆಯೇ ಲೋಕಸಭೆ ಅಧಿವೇಶನ ಕೊನೆಗೊಳ್ಳುವುದಕ್ಕೆ ಬಿಡದೇ ಚೊಚ್ಚಲ ಹೇಳಿಕೆ ನೀಡಿದರು. 15ನೇ ಲೋಕಸಭೆಯ ಕೊನೆಯ ದಿನ ಚೊಚ್ಚಲ ಭಾಷಣ ಮಾಡಿದ ಮಂಡ್ಯ ಎಂಪಿ ರಮ್ಯಾ, ಕಬ್ಬಿನ ಉಪಉತ್ಪನ್ನದಿಂದ ತಯಾರಿಸುವ ಎಥೆನಾಲ್ ಮುಂತಾದ ಹಸಿರು ಇಂಧನದ ಉಪಯುಕ್ತತೆ ಬಗ್ಗೆ ಗಮನ ಸೆಳೆದರು.ಕಬ್ಬು ರೈತರಿಗೆ ಎಥೆನಾಲ್ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಿ ಅದರ ತಯಾರಿಕೆಗೆ ನೆರವು ನೀಡಬೇಕು.ಬ್ರೆಜಿಲ್‌ನಲ್ಲಿ ಶೇ. 44ರಷ್ಟು ಸಾರ್ವಜನಿಕ ಸಾರಿಗೆಗೆ ಎಥನಾಲ್ ಅನ್ನು ಇಂಧನವಾಗಿ ಬಳಸುತ್ತಿದ್ದು, ಭಾರತ ಎಥೆನಾಲ್ ಅನಿಲವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿದರೆ ದೇಶದ ಇಂಧನ ಆಮದು ಬಿಲ್ ತಗ್ಗುತ್ತದೆ ಎಂದು ರಮ್ಯಾ ಹೇಳಿದರು.

ಲೋಕಸಭೆಗೆ ತಾನು ಕಳೆದ ವರ್ಷ ಆಯ್ಕೆಯಾದಾಗ ಹಾರ್ದಿಕವಾಗಿ ಸ್ವಾಗತಿಸಿದ ಇತರ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಸದಸ್ಯರು ಮೇಜು ಕುಟ್ಟುವ ಮೂಲಕ ಅವರ ಭಾಷಣಕ್ಕೆ ಸ್ವಾಗತಿಸಿದರು.

ವೆಬ್ದುನಿಯಾವನ್ನು ಓದಿ