ಗಂಡನ ಕಿರುಕುಳ ತಾಳದೇ ಆತ್ಮಹತ್ಯೆಗೆ ಶರಣಾದ ಮಹಿಳೆ

ಶನಿವಾರ, 30 ನವೆಂಬರ್ 2013 (15:53 IST)
PR
PR
ಪ್ರೀತಿಸಿ ಮದುವೆಯಾದ ಮಹಿಳೆಯೊಬ್ಬಳು ಗಂಡನ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಹನಗಳ್ಳಿಯಲ್ಲಿ ಸಂಭವಿಸಿದೆ. 6 ತಿಂಗಳ ಹಿಂದೆ ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಮೇಲೆ ಪತಿಯ ನಿಜಬಣ್ಣ ಬಯಲಾಯಿತು. ಪತಿ ಕೆಂಡಗಣ್ಣಸ್ವಾಮಿ ವರದಕ್ಷಿಣೆ ಕೊಟ್ಟಿಲ್ಲ ಎಂದು ಪತ್ನಿಯ ಜತೆ ಸದಾ ಜಗಳವಾಡುತ್ತಿದ್ದ. ಇದರಿಂದ ತೀವ್ರವಾಗಿ ನೊಂದ ಪ್ರಮೀಳಾ ಮೂರು ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿ ಪಾರಾಗಿದ್ದಳು. ಆದರೆ ಈಗ ಪ್ರಮೀಳಾ ಆತ್ಮಹತ್ಯೆ ಮಾಡಿಕೊಂಡಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಅವಳ ಶವ ಪತ್ತೆಯಾಗಿದೆ. ಪ್ರಮೀಳಾ ಸಾವಿನಿಂದ ಕಂಗಾಲಾದ ಪ್ರಮೀಳಾ ಮನೆಯವರು ಮನೆ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮೀಳಾ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತಿ ವೃತ್ತಿಯಲ್ಲಿ ಪೇಂಟರ್ ಆಗಿದ್ದರೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ತವರುಮನೆಯಿಂದ ಹಣವನ್ನು ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಿದ್ದ.

ವೆಬ್ದುನಿಯಾವನ್ನು ಓದಿ