ಗುಂಡುಹಾರಿಸಿಕೊಂಡು ಮಹಾರಾಷ್ಟ್ರ ಯೋಧ ಆತ್ಮಹತ್ಯೆ

ಶನಿವಾರ, 22 ಫೆಬ್ರವರಿ 2014 (12:00 IST)
PR
PR
ಮಂಗಳೂರು: ಮಹಾರಾಷ್ಟ್ರದ ಸಿಐಎಸ್‌ಎಫ್ ಯೋಧ ಸಂದೀಪ್ ಎಂಬವರು ಪಣಂಬೂರು ಬೀಚ್ ರಸ್ತೆಯ ಬಳಿ ತನ್ನ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲಾಧಿಕಾರಿಗಳ ನಿರಂತರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ಚಂದ್ರಪುರ ಮೂಲದವನಾದ ಅವರು ಕಳೆದ ಏಳು ತಿಂಗಳ ಹಿಂದೆ ಮದುವೆಯಾಗಿದ್ದರು.

ಅವನಿಗೆ ಊರಿಗೆ ಹೋಗಲು ರಜೆಯನ್ನು ಕೂಡ ಕೊಡುತ್ತಿರಲಿಲ್ಲವೆಂದು ಹೇಳಲಾಗಿದೆ. ಡೆಪ್ಯೂಟಿ ಕಮಾಂಡೆಂಟ್ ಅವರಿಗೆ ತೀವ್ರ ಕಿರುಕುಳ ನೀಡುತ್ತಿದ್ದರಿಂದ ಸಂದೀಪ್ ತೀವ್ರ ಮನನೊಂದಿದ್ದ. ಸಂದೀಪ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಗೆ ಕಂಡೊಯ್ಯಲಾಗಿದೆ.

ವೆಬ್ದುನಿಯಾವನ್ನು ಓದಿ