ಚಿಂದಿ ಆಯುವ ನೆಪದಲ್ಲಿ ಮಕ್ಕಳನ್ನು ಕದಿಯುವ ಖದೀಮರು

ಶುಕ್ರವಾರ, 4 ಅಕ್ಟೋಬರ್ 2013 (21:33 IST)
PR
PR
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದಲ್ಲಿ ಚಿಂದಿ ಆಯುವ ನೆಪದಲ್ಲಿ ಮಕ್ಕಳನ್ನು ಅಪಹರಣ ಮಾಡುತ್ತಿರುವ ಪ್ರಕರಣ ವರದಿಯಾಗಿದೆ. ಪ್ಲಾಸ್ಟಿಕ್ ಪೇಪರ್ ಆಯುವ ನೆಪದಲ್ಲಿ ಬಂದ ಖದೀಮನೊಬ್ಬ ಮನೆಯ ಮುಂದೆ ಆಡುತ್ತಿದ್ದ ಮಗುವನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಓಡುತ್ತಿದ್ದುದನ್ನು ನೋಡಿದ ಮಗುವಿನ ತಾಯಿ ಅವನ ಹಿಂದೆ ಕಿರುಚಿಕೊಳ್ಳುತ್ತಾ ಓಡಿದಾಗ ಸುತ್ತಮುತ್ತಲಿನ ಗ್ರಾಮಸ್ಥರು ಮಗುವಿನ ಕಳ್ಳನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.

ಇವರು ಬಾಂಗ್ಲಾದೇಶದಿಂದ ಬಂದ ಅಕ್ರಮವಲಸಿಗರು. ದುಡಿಯುವುದಕ್ಕೆ ದಾರಿ ಕಾರಣದೇ ಈ ಕಳ್ಳಮಾರ್ಗವನ್ನು ಹಿಡಿದಿದ್ದಾರೆನ್ನಲಾಗಿದೆ.

ವೆಬ್ದುನಿಯಾವನ್ನು ಓದಿ