ಜಿಂಕೆ ಬೇಟೆಯಾಡಿದ ಸಿಐಡಿ ಡಿವೈಎಸ್‌ಪಿ ಧರ್ಮೇಶ್ ಸೇರಿ 6 ಬಂಧನ

ಶುಕ್ರವಾರ, 31 ಜನವರಿ 2014 (17:29 IST)
PR
PR
ಮೈಸೂರು: ಮೈಸೂರು ಸಿಐಡಿ ಡಿವೈಎಸ್‌ಪಿ ಧರ್ಮೇಶ್ ಸೇರಿದಂತೆ 6 ಜನರನ್ನು ಜಿಂಕೆ ಬೇಟೆಯಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಓಂಕಾರ್ ಅರಣ್ಯ ವಲಯದಲ್ಲಿ ಜಿಂಕೆ ಭೇಟೆಯಾಡುತ್ತಿದ್ದಾಗ ಬಂಧಿಸಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಧರ್ಮೇಶ್ ತಮ್ಮ ಸ್ನೇಹಿತರೊಂದಿಗೆ ಅನಧಿಕೃತ ಪ್ರವೇಶ ಮಾಡಿ ಜಿಂಕೆಯೊಂದನ್ನು ಭೇಟಿಯಾಡಿ ಸತ್ತ ಜಿಂಕೆಯನ್ನು ಒಯ್ಯುತ್ತಿದ್ದಾಗ ಅರಣ್ಯ ವಲಯಾಧಿಕಾರಿ ಸತೀಶ್ ಬಂಧಿಸಿದರು.

ಅರಣ್ಯ ಕಾಯಿದೆ ಪ್ರಕಾರ ಅರಣ್ಯಕ್ಕೆ ಅನಧಿಕೃತ ಪ್ರವೇಶ ಮಾಡಿ ಜಿಂಕೆಯನ್ನು ಭೇಟೆಯಾಡಿರುವುದು ಅಕ್ಷ್ಯಮ್ಯ ಅಪರಾಧವೆಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ