ಸೃಷ್ಟಿ ಗ್ಲೋಬಲ್ ಮೆಡಿಕೇರ್ ಮೂಲಕ ಬಂಜೆತನ ನಿವಾರಿಸುವುದಾಗಿ ಹೇಳಿ ವಂಚಿಸಿದ ನಕಲಿ ವೈದ್ಯ ಕೆ.ಟಿ. ಗುರುಮೂರ್ತಿ ಈಗ ಪರಪ್ಪನ ಅಗ್ರಹಾರದಲ್ಲಿ ಕೈದಿ ನಂಬರ್ ಪಡೆದಿದ್ದು, ತನಗೆ ವಿಐಪಿ ಟ್ರೀಟ್ಮೆಂಟ್ ಕೊಡಬೇಕೆಂದು ಜೈಲಿನ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾನೆ. ಆದರೆ ಜೈಲಿನ ಆವರಣದಲ್ಲಿ ಓಡಾಡುತ್ತಿದ್ದ ಜೈಲಿನ ಕೆಲವು ಕೈದಿಗಳು ಗುರುಮೂರ್ತಿಯ ವಂಚನೆ ಪುರಾಣ ತಿಳಿದಿದ್ದು, ಹಿಗ್ಗಾಮುಗ್ಗಾ ಥಳಿಸುವ ಮೂಲಕ ಸರಿಯಾದ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಪಾಪಿ, ಹೆಣ್ಣುಮಕ್ಕಳಿಗೆ ತೊಂದರೆ ಕೊಡ್ತೀಯಾ ಎಂದು ಹೇಳಿ ಚೆನ್ನಾಗಿ ಥಳಿಸಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸರುಗುರುಮೂರ್ತಿಯ ವಂಚನೆಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಗುರುಮೂರ್ತಿ ಜೈಲು ಸೇರಿ 3 ದಿನಗಳಾಗಿದ್ದು, ಇನ್ನೂ 12 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗುತ್ತದೆ