ದತ್ತಮಾಲೆ ಅಭಿಯಾನಕ್ಕೆ ತೆರೆ

ಮಂಗಳವಾರ, 14 ಅಕ್ಟೋಬರ್ 2008 (20:31 IST)
ಬಾಬಾಬುಡನ್ ಗಿರಿಯಲ್ಲಿ ಆರಂಭಗೊಂಡಿರುವ ದತ್ತಮಾಲಾ ಅಭಿಯಾನಕ್ಕೆ ಮಂಗಳವಾರ ಸಂಜೆ ಅಧಿಕೃತವಾಗಿ ತೆರೆ ಬಿದ್ದಿದೆ.

ದತ್ತಮಾಲಾ ಅಭಿಯಾನದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದು, ಇರುಮುಡಿಯನ್ನು ಸಮರ್ಪಿಸಿದರು.ದತ್ ಪೀಠದ ಗುಹೆ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು.

ಆದರೆ ಶ್ರೀರಾಮ ಸೇನೆ ತಾತ್ಕಾಲಿಕ ಶೆಡ್‌ವೊಂದರಲ್ಲಿ ದತ್ತಾತ್ರೇಯನ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿರುವುದಾಗಿ ಸೇನೆಯ ಮೂಲಗಳು ಹೇಳಿವೆ.

ಏತನ್ಮಧ್ಯೆ ದತ್ತಮಾಲಾ ಅಭಿಯಾನದ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 25ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಕ್ಕೆ ಎಚ್ಚರಿಕೆ: ದತ್ತಪೀಠಕ್ಕೆ ಹಾಗೂ ಹಿಂದೂತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೃಧುಧೋರಣೆ ತಳೆದರೆ ಅದಕ್ಕೆ ತಕ್ಕ ತಲೆದಂಡೆ ತೆರಬೇಕಾಗುತ್ತದೆ ಎಂದು ಶ್ರೀರಾಮಸೇನೆಯ ಹರಿಪ್ರಸಾದ್ ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ದತ್ತಪೀಠಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಶ್ರೀರಾಮಸೇನೆ ಚಳವಳಿ ನಡೆಸಲಿದೆ ಎಂಬುದಾಗಿಯೂ ಈ ಸಂದರ್ಭದಲ್ಲಿ ಅವರು ತಿಳಿಸಿದರು.

ವೆಬ್ದುನಿಯಾವನ್ನು ಓದಿ