ದಸರಾ ಮೆರವಣಿಗೆ ರಸ್ತೆ ಅಭಿವೃದ್ದಿಗೆ 16 ಕೋಟಿ: ಶೋಭಾ

ಶನಿವಾರ, 23 ಮೇ 2009 (17:43 IST)
ಮೈಸೂರು ದಸರಾ ಪ್ರಯುಕ್ತ ಹಲವಾರು ಯೋಜನೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮೈಸೂರಿನಲ್ಲಿ ದಸರಾ ಮೆರವಣಿಗೆ ಸಾಗುವ ಮಾರ್ಗವನ್ನು ಶಾಶ್ವತವಾಗಿ ಅಭಿವೃದ್ದಿ ಪಡಿಸಲು ರಾಜ್ಯ ಸರ್ಕಾರ 16 ಕೋಟಿ ರೂ. ಯೋಜನೆ ಜಾರಿಗೆ ತರಲು ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಮೈಸೂರಿನಲ್ಲಿ ಹೆಚ್ಚುವರಿ ಕಾಮಗಾರಿಗಾಗಿ ಸರ್ಕಾರ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಆ ಅನುದಾನದ ಹಣದಲ್ಲಿ 16 ಕೋಟಿ ರೂ. ಅನ್ನು ಮೈಸೂರು ದಸರಾ ಮೆರವಣಿಗೆ ನಡೆಯುವ ಅರಮನೆ ಮುಂಭಾಗದಿಂದ ಬನ್ನಿಮಂಟಪದವರೆಗಿನ ಮಾರ್ಗಕ್ಕೆ ಶಾಶ್ವತ ಮಾರ್ಗ ಕಲ್ಪಿಸಲು ಬಳಸಲಾಗುತ್ತದೆ ಎಂದರು.

ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗಿನ ಮಾರ್ಗವನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಲಾಗುತ್ತದೆ. ರಸ್ತೆಯ ಎರಡು ಕಡೆ ಶಾಶ್ವತವಾಗಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ವೆಬ್ದುನಿಯಾವನ್ನು ಓದಿ