ದಾವಣಗೆರೆ ಕುಲಪತಿ ನೇಮಕ: ರಾಜ್ಯಪಾಲರ ವಿರುದ್ಧ ಅನಂತಮೂರ್ತಿ ಕಿಡಿ

ಸೋಮವಾರ, 30 ಡಿಸೆಂಬರ್ 2013 (16:42 IST)
PR
PR
ಬೆಂಗಳೂರು: ದಾವಣಗೆರೆ ವಿವಿ ಕುಲಪತಿ ನೇಮಕ ವಿಚಾರದಲ್ಲಿ ಪಾರದರ್ಶಕತೆಯೇ ಇಲ್ಲವೆಂದು ಶೋಧನಾ ಸಮಿತಿ ಅಧ್ಯಕ್ಷ ಅನಂತಮೂರ್ತಿ ಕಿಡಿಕಾರಿದ್ದಾರೆ. ನನ್ನ ಹೆಸರಿಗೆ ಬೆಲೆ ಇದ್ದರೆ ಸಿಎಂ ಸಾಹೇಬರೇ, ಕುಲಪತಿಗಳ ನೇಮಕ ದಂಧೆ ನಿಲ್ಲಿಸಲು ಆಗುವುದಿಲ್ಲವೇ, ಸಿಎಂ ಮದ್ಯಪ್ರವೇಶಿಸಿ ಹೋರಾಟ ಮಾಡಿ, ಕುಲಪತಿಗಳ ನೇಮಕ ದಂಧೆಯಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸದೇ ರಾಜ್ಯಪಾಲರು ಪದೇ ಪದೇ ಮಿತಿ ದಾಟುತ್ತಿದ್ದಾರೆ ಎಂದು ಶೋಧನಾ ಸಮಿತಿ ಅಧ್ಯಕ್ಷ ಅನಂತಮೂರ್ತಿ ನೇರವಾಗಿ ಕಿಡಿಕಾರಿದರು.

ಕುಲಪತಿ ಬಿ.ಬಿ. ಕಲಿವಾಳರನ್ನು ಬದಲಿಸಬೇಕು ಎಂದು ಒತ್ತಾಯಿಸಿದರು.ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯೇ ಇಲ್ಲ. ಬುಡಕಟ್ಟು ಸಮುದಾಯ ಪ್ರತಿನಿಧಿಸೋ ಗೋಮತಿದೇವಿಯವರನ್ನು ಕುಲಪತಿ ಹುದ್ದೆಗೆ ನೇಮಿಸದೇ ಅನ್ಯಾಯ ಮಾಡಲಾಗಿದೆ ಎಂದು ಅನಂತಮೂರ್ತಿ ದೂರಿದರು.

ವೆಬ್ದುನಿಯಾವನ್ನು ಓದಿ