ದೇವರಾಜ ಅರಸು ಮನೆಯ ಮೇಲೆ ರೌಡಿಗಳ ದಾಳಿ

ಬುಧವಾರ, 31 ಜುಲೈ 2013 (13:08 IST)
PR
PR
ಬೆಂಗಳೂರು: ಭೂಸುಧಾರಣೆಯ ಹರಿಕಾರ, ಬಡವರ ಬಂಧು, ಜನಪ್ರಿಯ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಮನೆಯ ಮೇಲೆ 60ಕ್ಕೂ ಹೆಚ್ಚು ರೌಡಿಗಳ ಗುಂಪು ದಾಳಿ ಮಾಡಿ ಮನೆಯ ವಸ್ತುಗಳನ್ನು ಧ್ವಂಸ ಮಾಡಿದ ಅಮಾನವೀಯ ಘಟನೆ ನಡೆದಿದೆ.

ಬೆಂಗಳೂರಿನ ಸದಾಶಿವನಗರದ ಅವರ ನಿವಾಸದ ಮೇಲೆ ರೌಡಿಗಳು ದಾಳಿ ನಡೆಸಿದರು. ದೇವರಾಜ ಅರಸು ಅವರ ಮನೆಯನ್ನು ವಶಕ್ಕೆ ತೆಗೆದುಕೊಳ್ಳಲು ಭೂಗಳ್ಳರು ಪ್ರಯತ್ನಿಸುತ್ತಿದ್ದು, ಬೆತ್ತನಗರೆ ರಮೇಶ್‌ ನಕಲಿ ದಾಖಲೆ ಸೃಷ್ಟಿಸಿದ್ದಾನೆಂದು ಹೇಳಲಾಗುತ್ತಿದೆ. ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವರಾಜ ಅರಸು ಮನೆಯ ಮೇಲೆ ರೌಡಿಗಳ ದಾಳಿಯಿಂದ ಅರಸು ಮನೆಯ ಬಳಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಬೆಲೆಬಾಳುವ ಈ ನಿವೇಶನವನ್ನು ವಶಕ್ಕೆ ಪಡೆಯಲು ಬಿಡಿಎ ಎರಡು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು.

ವೆಬ್ದುನಿಯಾವನ್ನು ಓದಿ