ಧನಂಜಯ್ ಕುಮಾರ್, ಬಸವರಾಜ್ ಬಿಜೆಪಿಗೆ ಸೇರುವುದಕ್ಕೆ ಅಪಸ್ವರ

ಶುಕ್ರವಾರ, 10 ಜನವರಿ 2014 (11:51 IST)
PR
PR
ಬಿಜೆಪಿಯನ್ನು ತೊರೆದು ಕೆಜೆಪಿಯನ್ನು ಕಟ್ಟಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವ ಮುಖಂಡ ಯಡಿಯೂರಪ್ಪನವರ ಇಬ್ಬರು ಬೆಂಬಲಿಗರು ಬಿಜೆಪಿಗೆ ಸೇರುವುದಕ್ಕೆ ಈಗ ಅಪಸ್ವರ ಎದ್ದಿದೆ. ಧನಂಜಯ ಕುಮಾರ್, ಸಂಸದ ಬಸವರಾಜ್ ಸೇರ್ಪಡೆಗೆ ಪಕ್ಷದಲ್ಲಿ ತೀವ್ರ ಅಪಸ್ವರ ಹೊಗೆಯಾಡಿದೆ. ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿಯಲ್ಲೂ ಈ ಕುರಿತು ಚರ್ಚೆಯಾಗಿದೆ. ಬಿಜೆಪಿ ವರಿಷ್ಠರ ವಿರುದ್ಧ ಇಬ್ಬರೂ ನಾಯಕರು ವಾಗ್ದಾಳಿ ನಡೆಸಿದ್ದರು. ಆದ್ದರಿಂದ ಇಬ್ಬರನ್ನೂ ದೂರವಿಡಲು ನಿರ್ಧರಿಸಲಾಗಿದೆ. ಕೆಜೆಪಿಯ ಉಳಿದ ಸದಸ್ಯರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಒಪ್ಪಿಗೆ ಸಿಕ್ಕಿದ್ದರೂ ಧನಂಜಯ್ ಕುಮಾರ್ ಮತ್ತು ಬಸವರಾಜ್ ಸೇರ್ಪಡೆಗೆ ಮಾತ್ರ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ಅಧ್ಯಕ್ಷ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಸಭೆ ಡನೆಯುತ್ತಿದೆ. 13 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚಿಸಲಾಯಿತು. ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಯಿತು. ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಸದಾನಂದ ಗೌಡ, ಈಶ್ವರಪ್ಪ, ಸಂತೋಷ್ ಮುಂತಾದ ಮುಖಂಡರು ಭಾಗಿಯಾಗಿದ್ದರು.

ವೆಬ್ದುನಿಯಾವನ್ನು ಓದಿ