ನಾಳೆ ಯಾರಿಗೆ ಒಲಿಯುತ್ತೆ ಮೇಯರ್ ಸ್ಥಾನ?

ಮಂಗಳವಾರ, 3 ಸೆಪ್ಟಂಬರ್ 2013 (21:43 IST)
PR
PR
ಬೆಂಗಳೂರು: ಮೇಯರ್ ಮತ್ತು ಉಪಮೇಯರ್ ಹಾಗೂ 12 ಸ್ಥಾಯಿಸಮಿತಿಗಳ ಆಯ್ಕೆಗೆ ನಾಳೆ ಬುಧವಾರ ಚುನಾವಣೆ ನಡೆಯಲಿದೆ. ಬಿಬಿಎಂಪಿ ಮೇಯರ್ ಆಯ್ಕೆಗೆ ಬಿಜೆಪಿಯಲ್ಲಿ ತೀವ್ರ ಕಸರತ್ತು ನಡೆದಿದ್ದು, ಅಭ್ಯರ್ಥಿ ಹುಡುಕಾಟ ಮುಂದುವರಿದಿದೆ. ಮೇಯರ್ ರೇಸ್‌ನಲ್ಲಿ ಕಟ್ಟೆ ಸತ್ಯನಾರಾಯಣ ಹೆಸರು ಕೇಳಿಬರುತ್ತಿದೆ. ಮೇಯರ್ ದಕ್ಷಿಣ ಭಾಗಕ್ಕೆ ಒಲಿಯುವ ಸಾಧ್ಯತೆ ದಟ್ಟವಾಗಿದೆ.. ಮಾಜಿ ಮಂತ್ರಿ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರ ಸಭೆ ನಡೆಯಿತು.
ವೆಂಕಟೇಶ್ ಮೂರ್ತಿ ಸುದ್ದಿಗೋಷ್ಠಿ:
ಮೇಯರ್ ವೆಂಕಟೇಶ್ ಮೂರ್ತಿ ಅವರ ಅಧಿಕಾರಾವಾಧಿ ಮುಕ್ತಾಯವಾಗಿದ್ದು, ಕೊನೆಯ ಸುದ್ದಿಗೋಷ್ಠಿ ನಡೆಸಿದರು. ಒಂದು ವರ್ಷದಲ್ಲಿ ಎಲ್ಲ ಕೆಲಸ ಮಾಡಲು ಸಾಧ್ಯವಾಗಿಲ್ಲ. ಮೇಯರ್ ಕೆಲಸ ತಮಗೆ ತೃಪ್ತಿ ತಂದಿದೆ. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ವಲಸಿಗರಿಂದ ನನ್ನ ವಿರುದ್ಧ ಅಪಪ್ರಚಾರ ನಡೆದಿದೆ ಎಂದು ವೆಂಕಟೇಶ್ ಮೂರ್ತಿ ಹೇಳಿದರು.

ವೆಬ್ದುನಿಯಾವನ್ನು ಓದಿ