ಪೋಲೀಸರಿಗೆ 93 ಲಕ್ಷ ವಿಮೆ ಹಣ ನಾಮ..!

ಶನಿವಾರ, 31 ಆಗಸ್ಟ್ 2013 (10:46 IST)
PR
PR
ಆಸ್ಪತ್ರೆಯ ಸಿಬ್ಬಂದ್ದಿಗಳು ಪೋಲೀಸರಿಗೆ ಉಂಡೆ ನಾಮ ತಿಕ್ಕಿದ್ದಾರೆ. 93 ಲಕ್ಷ ರೂಪಾಯಿಗಳ ವಿಮೆ ಹಣವನ್ನು ನೀಡದೇ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ವಂಚನೆಗೊಳಗಾದ ಎಸ್‌ಐ ಆಸ್ಪತ್ರೆಯ ಮಾಲೀಕ ಮತ್ತು ಮ್ಯಾನೇಜರ್‌ ವಿರುದ್ಧ ದೂರು ದಾಖಲಿಸಿದ್ದಾರೆ.

ಢೆಂಗಿ ಜ್ವರದಿಂದ ಬಳಲುತ್ತಿದ್ದ ಗಿರಿನಗರದ ಎಸ್‌ಐ ನಗರದ ಕೆಆರ್‌ ಆಸ್ಪತ್ರೆಗೆ ಚಿಕಿತ್ಸೆಯ ನಿಮಿತ್ತ ದಾಖಲಾಗಿದ್ದರು. ಆದರೆ ಚಿಕಿತ್ಸೆಯ ಹಣವನ್ನು ವಿಮೆಯ ಮೂಲಕ ಭರಿಸುವ ಆಲೋಚನೆ ಎಸ್‌ಐಗೆ ಇತ್ತು. ಆದರೆ ಕೆಆರ್‌ ಆಸ್ಪತ್ರೆಯ ಸಿಬ್ಬಂಧಿಗಳು ಇದಕ್ಕೆ ಸೂಕ್ತವಾಗಿ ಸ್ಪಂದಿಸದೇ 93 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್‌ಐ ಹನುಮಂತನಗರದಲ್ಲಿ ದೂರು ದಾಖಳಿಸಲಾಗಿದೆ.

ಕೆಆರ್‌ ಆಸ್ಪತ್ರೆಯ ಮಾಲೀಕ ಹರಿಪ್ರಸಾದ್‌ ಮತ್ತು ಮ್ಯಾನೇಜರ್‌ ಮಹೇಶ್‌ ಇಬ್ಬರನ್ನೂ ಇದೀಗ ಪೋಲೀಸರು ಬಂಧಿಸಿದ್ದು, ಲಕ್ಷದ ವಂಚನೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ