'ಬರೋದು, ಎದ್ದುಹೋಗೋದು, ಅಯ್ಯೋ ಇವ್ರಿಗೆಲ್ಲಾ ಏನಾಗಿದೆ'

ಶನಿವಾರ, 22 ಫೆಬ್ರವರಿ 2014 (16:34 IST)
PR
PR
ಬರೋದು, ಎದ್ದು ಹೋಗೋದು, ಅಯ್ಯೋ, ಇವ್ರಿಗೆಲ್ಲಾ ಏನಾಗಿದೆ, ಸುಮ್ಮನೇ ನೋಟೀಸ್ ಕೊಡ್ತಾರೆ, ಎದ್ದು ಹೋಗ್ತಾರೆ, ನೀವೆಲ್ಲಾ ಯುವಕರಾಗಿದ್ದೀರಿ, ಪ್ರಶ್ನೆ ಕೇಳುವ ಅವಕಾಶ ಬಂದಾಗ ಸದನದಲ್ಲೇ ಕುಳಿತು ಕ್ಷೇತ್ರದ ಸಮಸ್ಯೆ ಬಗ್ಗೆ ಗಮನಸೆಳೆಯಬೇಕು. ಸದನದಲ್ಲಿ ಚರ್ಚೆ ನಡೆಯುವಾಗ ಸಾವಧಾನದಿಂದ ಕುಳಿತು ಕೇಳಬೇಕು ಎಂದು ಯುವ ಸದಸ್ಯರನ್ನು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತರಾಟೆಗೆ ತೆಗೆದುಕೊಂಡರು. ಶುಕ್ರವಾರ ವಿಧಾನಸಭಾ ಕಲಾಪದ ಮೇಲೆ ಹೆಚ್ಚು ಕಡಿಮೆ ರಜೆಯ ಛಾಯೆ ಆವರಿಸಿಕೊಂಡಿತ್ತು. ಮೇಲಾಗಿ ಬಜೆಟ್ ಬಗ್ಗೆ ಚರ್ಚೆ ನಡೆಯುತ್ತಿದ್ದರಿಂದ ಹೆಚ್ಚಿನ ಶಾಸಕರು ಎದ್ದು ಹೋಗಿದ್ದರು. ಹೀಗಾಗಿ ನೋಟಿಸ್ ಕಳುಹಿಸಿಕೊಟ್ಟವರಾರು ಇರಲಿಲ್ಲ.

ಇದರಿಂದ ಸಿಟ್ಟಿಗೆದ್ದ ಸ್ಪೀಕರ್ ಪ್ರಶ್ನೆ ಕೇಳಿ ನೋಟಿಸ್ ಕಳುಹಿಸಿದವರಾದರೂ ಸದನದಲ್ಲಿ ಇರಬೇಕಲ್ಲವೇ? ಎಲ್ಲಿ ಹೋದರು ಇವರು? ಎಂದು ಕೋಪಾವೇಶ ತೋರಿಸಿದರು. ಆಗ ಮಧ್ಯಪ್ರವೇಶ ಮಾಡಿದ ಬಿಜೆಪಿಯ ಸಿ.ಟಿ.ರವಿ, ಪ್ರಶ್ನೆ ಕೇಳಿದವರೆಲ್ಲ ಉತ್ತರ ಹುಡುಕಿಕೊಂಡು ಹೊರಗೆ ಹೋಗಿರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.

ವೆಬ್ದುನಿಯಾವನ್ನು ಓದಿ