ಬಿಎಸ್‌ವೈಗೆ 1ಸಾವಿರ ಕೋಟಿ ಖರ್ಚು ಮಾಡೋ ತಾಕತ್ತಿದೆ: ಸಿದ್ದು

ಶನಿವಾರ, 31 ಡಿಸೆಂಬರ್ 2011 (15:11 IST)
PR
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶತಾಯಗತಾಯ ಮತ್ತೆ ಸಿಎಂ ಗಾದಿಗೆ ಏರಲು ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಒಬ್ಬರೇ ಒಂದು ಸಾವಿರ ಕೋಟಿ ಖರ್ಚು ಮಾಡುವಷ್ಟು ಸ್ಥಿತಿವಂತರಾಗಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅವರು ಶುಕ್ರವಾರ ಧರ್ಮಸ್ಥಳದಿಂದ ಬಜಪೆಗೆ ಹೋಗುವ ದಾರಿಯಲ್ಲಿ ಬಿ.ಸಿ.ರೋಡಿನಲ್ಲಿ ಲಘ ಉಪಹಾರ ಸೇವಿಸುತ್ತಾ ಸುದ್ದಿಗಾರರ ಜತೆಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡಿದರು.

ಯಡಿಯೂರಪ್ಪ ತನ್ನ ಇಚ್ಛೆ ನೆರವೇರದಿದ್ದಲ್ಲಿ ಹೊಸ ಪಕ್ಷ ಕಟ್ಟುವಷ್ಟು ಸಮರ್ಥರಾಗಿದ್ದಾರೆ. ಅವರಲ್ಲಿ ಹಣಬಲ ಇದೆ. ಮೊನ್ನೆಯ ಬಳ್ಳಾರಿ ಉಪ ಚುನಾವಣೆಯಲ್ಲಿ ಶ್ರೀರಾಮುಲು 65 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಪ್ರತಿ ವೋಟಿಗೆ ಐದು ಸಾವಿರದಂತೆ ಮತದಾರರಿಗೆ ನೀಡಿದ್ದಾರೆ ಎಂದು ಆರೋಪಿಸಿದರು.

ರಾಜಕೀಯ ಪಕ್ಷದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅದೊಂದು ಫ್ಯಾಶನ್ ಎಂಬಂತೆ ಕಾಣಲಾಗಿದೆ. ಅದರಲ್ಲಿ ಯಾರು ಹೆಚ್ಚು ಎಂಬಂತೆ ಗುರುತಿಸಿಕೊಳ್ಳುವಂತಹ ಪರಿಸ್ಥಿತಿಗೆ ತಲುಪಿದೆ ಎಂದರು.

ವೆಬ್ದುನಿಯಾವನ್ನು ಓದಿ