ಬಿಐಎಎಲ್ ಕಳಪೆ ಗುಣಮಟ್ಟ: ಡಿಕೆಶಿ

ಶನಿವಾರ, 22 ನವೆಂಬರ್ 2008 (14:42 IST)
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಳಪೆ ಗುಣಮಟ್ಟದಲ್ಲಿ ಕಟ್ಟಲಾಗಿದೆ ಎಂದು ಕೆಪಿಸಿಸಿ ಕಾರ್ಯಧಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲಾಭಕ್ಕಾಗಿ ಕಟ್ಟಲಾಗಿದೆ ವಿನಃ ಗುಣಮಟ್ಟದಲ್ಲಿ ಕೊರತೆ ಕಂಡು ಬಂದಿದೆ ಎಂದರು.

ಈ ಕಾಮಗಾರಿಯಲ್ಲಿ ಭಾರೀ ವಂಚನೆ ನಡೆದಿದ್ದು, ಗುತ್ತಿಗೆದಾರರಾದ ವಿಮನ್ಸ್ ಕಂಪೆನಿಯಿಂದ ಮೋಸವಾಗಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಇದು ಅಂತಾರಾಷ್ಟ್ರೀಯ ಗುಣಮಟ್ಟವಿಲ್ಲದ ನಿಲ್ದಾಣ ಎಂದು ದೂರಿದರು.

ಈ ಬಗ್ಗೆ ಜಂಟಿ ಸದನ ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಡಿ.ಕೆ.ಶಿವಕುಮಾರ್, ನಿಲ್ದಾಣದ ಉಸ್ತುವಾರಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನೀಡಬೇಕೆಂದು ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ