ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಅಶೋಕ್ ವಿರುದ್ಧ ಡಿವಿಎಸ್ ವಾಗ್ದಾಳಿ

ಮಂಗಳವಾರ, 21 ಜನವರಿ 2014 (13:48 IST)
PR
PR
ಬಿಜೆಪಿಯಲ್ಲಿ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಕುರಿತಾಗಿ ಭಿನ್ನಮತ ಸ್ಫೋಟಿಸಿದೆ. ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ಗೆ ತೀವ್ರ ಪೈಪೋಟಿ ಕಂಡುಬಂದಿದ್ದು, ಯಾರಿಗೆ ಟಿಕೆಟ್ ಕೊಡಬೇಕು ಎಂಬ ಗೊಂದಲ ಉಂಟಾಗಿದೆ. ಈ ಕುರಿತು ಹಿರಿಯ ನಾಯಕರಲ್ಲೇ ಭಿನ್ನಮತ ಸೃಷ್ಟಿಯಾಗಿದೆ. ಅಶೋಕ್ ವಿರುದ್ಧ ಸದಾನಂದ ಗೌಡ ಪರೋಕ್ಷ ವಾಗ್ದಾಳಿ ಮಾಡಿದ್ದಾರೆ.

ನನಗೆ ಎಲ್ಲೇ ಟಿಕೆಟ್ ಕಟ್ಟರೂ ನಾನು ಸ್ಪರ್ಧಿಸುತ್ತೇನೆ. ರಾಹುಲ್ ಎಲ್ಲೆ ನಿಂತರೂ ಅವರ ವಿರುದ್ಧ ಸ್ಪರ್ಧಿಸುತ್ತೇನೆ. ನಾನು ನಾಲ್ಕುವರೆ ವರ್ಷಗಳಲ್ಲಿ ಪಕ್ಷದ ಅಧ್ಯಕ್ಷನಾಗಿದ್ದೇನೆ. ಸುಷ್ಮಾಸ್ವರಾಜ್, ಹೇಮಮಾಲಿನಿ, ವೆಂಕಯ್ಯ ನಾಯ್ಡು ಹೊರಗಿನವರಲ್ಲವೇ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ