ಬಿಜೆಪಿ ಅಭ್ಯರ್ಥಿ ಮೋಹನ್ ಪರ ಸ್ಟಾರ್ ನಟ ದರ್ಶನ್ ಪ್ರಚಾರ

ಬುಧವಾರ, 9 ಏಪ್ರಿಲ್ 2014 (11:42 IST)
PR
PR
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರ ಚಿತ್ರನಟ ದರ್ಶನ್ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಮಾಗಡಿ ರಸ್ತೆಯ ಕೆಪಿ ಅಗ್ರಹಾರದಲ್ಲಿ ನಡೆದ ರೋಡ್ ಶೋನಲ್ಲಿ ದರ್ಶನ್ ಭಾಗವಹಿಸಿ ಪಿ.ಸಿ. ಮೋಹನ್ ಪರ ಮತ ಯಾಚನೆ ಮಾಡಿದರು. ಪಿ.ಸಿ. ಮೋಹನ್ ಅವರು 6 ತಿಂಗಳ ಹಿಂದೆ ತಮ್ಮನ್ನು ಸಂಪರ್ಕಿಸಿ ಪ್ರಚಾರಕ್ಕೆ ಕರೆದಿದ್ದರು. ಆದರೆ ತಾವು ರಾಜಕೀಯಕ್ಕೆ ಇಳಿಯುವುದಿಲ್ಲ ಮತ್ತು ರಾಜಕೀಯ ಒಗ್ಗುವುದಿಲ್ಲ ಎಂದು ದರ್ಶನ್ ಹೇಳಿದ್ದಾರೆ.

ಸ್ನೇಹಿತರಾಗಿ ಆತ್ಮೀಯತೆಯಿಂದ ನಾನು ಪ್ರಚಾರ ಮಾಡುತ್ತಿದ್ದೇನೆ ಅಷ್ಟೇ ಎಂದು ದರ್ಶನ್ ಹೇಳಿದರು. ಬೇರೆ ಯಾರೇ ಕರೆದರೂ ತಾವು ಪ್ರಚಾರಕ್ಕೆ ಹೋಗುವುದಿಲ್ಲ ಎಂದೂ ದರ್ಶನ್ ಈ ಸಂದರ್ಭದಲ್ಲಿ ತಿಳಿಸಿದರು.

ವೆಬ್ದುನಿಯಾವನ್ನು ಓದಿ