ಬಿಜೆಪಿ ನಾಯಕರಿಂದ ಸಿಎಂ ಮನೆ ಮುತ್ತಿಗೆ.

ಬುಧವಾರ, 23 ಅಕ್ಟೋಬರ್ 2013 (12:35 IST)
PR
PR
ಕಾಂಗ್ರೆಸ್‌ ಸರ್ಕಾರದ ಅಕ್ರಮ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಬಿಜೆಪಿ ನಾಯಕರು ಸಿಎಂ ಸಿದ್ರಾಮಯ್ಯನವರ ಗೃಹ ಕಛೇರಿಗೆ ಮುತ್ತಿ ಹಾಕಲು ಸನ್ನದ್ಧರಾಗಿದ್ದಾರೆ. ಪ್ರಹಲ್ಲಾದ್ ಜೋಷಿಯವರ ನೇತೃತ್ವದದಲ್ಲಿ ಈ ಮುತ್ತಿಗೆ ಕಾರ್ಯಕ್ರಮ ನಡೆಯುತ್ತಿದ್ದು, ಬಿಜೆಪಿಯ ಪ್ರಮುಖ ನಾಯಕರಾದ ಕೆಎಸ್‌ ಈಶ್ವರಪ್ಪ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಆರ್‌ ಅಶೋಕ್ ಸೇರಿದಂತೆ ಹಲವಾರು ನಾಯಕರು ಪ್ರಹಲ್ಲಾದ್ ಜೋಷಿಗೆ ಸಾಥ್‌ ನೀಡಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಿಂದ ಆರಂಭವಾಗಿರುವ ಈ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಸಿಎಂ ಸಿದ್ರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೇ ವೇಳೆ ಮಾತನಾಡಿದ ಕೆಎಸ್‌ ಈಶ್ವರಪ್ಪ ಸಂತೋಷ್‌ ಲಾಡ್‌ ಅವರ ಅಕ್ರಮ ಸಂಪತ್ತಿನಿಂದ ಸಿದ್ರಾಮಯ್ಯನವರು ಸಿಎಂ ಸ್ಥಾನವನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದ್ರು. ಹೀಗಾಗಿಯೇ ಸಂತೋಷ್‌ ಲಾಡ್‌ ಅವರನ್ನು ಸಂಪುಟದಿಂದ ಕೈ ಬಿಡಲು ಸಿದ್ರಾಯಮಯ್ಯ ಒಪ್ಪುತ್ತಿಲ್ಲ ಎಂದು ಸಿದ್ದು ಕಾರ್ಯವೈಖರಿಯನ್ನು ಖಂಡಿಸಿದ್ರು.

ವೆಬ್ದುನಿಯಾವನ್ನು ಓದಿ