ಬಿಜೆಪಿ ವಿದ್ಯಾಮಾನಗಳಿಗೆ ಬೇಸತ್ತು ರಾಜೀನಾಮೆ: ಬೆಲ್ಲದ್

ಬುಧವಾರ, 27 ಮಾರ್ಚ್ 2013 (18:28 IST)
ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರಕಾಂತ್ ಬೆಲ್ಲದ್ ಅವರು ಬುಧವಾರ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬೆಲ್ಲದ್ ಅವರು, ಬಿಜೆಪಿಯಲ್ಲಿನ ವಿದ್ಯಾಮಾನಗಳಿಗೆ ಬೇಸತ್ತು ತಾವು ರಾಜಕೀಯ ನಿವೃತ್ತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

ಸದ್ಯದ ರಾಜಕೀಯ ಅಸಹ್ಯ ಮೂಡಿಸಿದೆ ಎಂದು ರಾಜಕೀಯದ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಸಿದ್ದಾರೆ.

ವೆಬ್ದುನಿಯಾವನ್ನು ಓದಿ