ಬೆಂಗಳೂರಿನಲ್ಲಿ ಹಾಡುಹಗಲೇ 8 ರೌಡಿಗಳಿಂದ ಮೂವರ ಮೇಲೆ ಹಲ್ಲೆ

ಸೋಮವಾರ, 3 ಫೆಬ್ರವರಿ 2014 (15:37 IST)
PR
PR
ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರದಲ್ಲಿ ಹಾಡುಹಗಲೇ ರಸ್ತೆಯಲ್ಲಿ ಲಾಂಗು,ಮಚ್ಚು, ಹಾಕಿಸ್ಟಿಕ್‌ ಹಿಡಿದಿದ್ದ 8 ಮಂದಿ ಗುಂಪು ಜಯಕರ್ನಾಟಕ ಸಂಘಟನೆ ಸದಸ್ಯ ರೇಣುಕ ಮತ್ತು ಮೋಹನ್, ಬಾಲರಾಜು ಎಂಬವರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. 8 ಜನ ದುಷ್ಕರ್ಮಿಗಳು ರೇಣುಕಾ ಎಂಬವರ ಮೆಡಿಕಲ್ ಶಾಪ್ ಬಳಿಗೆ ಬಂದು ರೇಣುಕಾ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ ಮಾಡಿದರು.

ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 8 ಜನ ದುಷ್ಕರ್ಮಿಗಳು ನಡುರಸ್ತೆಯಲ್ಲೇ ಲಾಂಗು, ಮಚ್ಚು ಹಿಡಿದು ಓಡಾಡುತ್ತಿದ್ದ ದೃಶ್ಯ ಸಾರ್ವಜನಿಕರಲ್ಲಿ ಭೀತಿ ಮೂಡಿಸಿತು. ಹಲ್ಲೆ ಮಾಡಲು ನಿಖರ ಕಾರಣವೇನೆಂಬುದು ತಿಳಿದುಬಂದಿಲ್ಲ. ಅಪಘಾತಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ