ಬೆಂಗಳೂರು, ಮೈಸೂರು ನಡುವೆ ಸ್ಪೈಸ್ ಜೆಟ್ ವಿಮಾನ

ಭಾನುವಾರ, 2 ಫೆಬ್ರವರಿ 2014 (19:34 IST)
PR
PR
ಮೈಸೂರು ಮತ್ತು ಬೆಂಗಳೂರಿನ ನಡುವೆ ಸ್ಪೈಸ್ ಜೆಟ್ ವಿಮಾನಯಾನಕ್ಕೆ ಮೈಸೂರಿನ ಸಂಸದ ಎಚ್ ವಿಶ್ವನಾಥ್ ಅವರು ಚಾಲನೆ ನೀಡಿದರು. ಮೈಸೂರಿನಿಂದ ಚೆನ್ನೈ ತಲುಪುವ ಮುನ್ನ ಸ್ಪೈಸ್ ಜೆಟ್ ವಿಮಾನಗಳು ಬೆಂಗಳೂರಿನಲ್ಲಿ ನಿಲುಗಡೆಯಾಗಿ ನಂತರ ಚೆನ್ನೈ ತಲುಪಲಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಯಾನವನ್ನು ನಿಲ್ಲಿಸಲಾಗಿತ್ತು. ಬೆಂಗಳೂರು ಮೈಸೂರು ನಡುವೆ ವಿಮಾನಯಾನ ಮುಂದುವರಿಸುವಂತೆ ಐಟಿ ಕಂಪೆನಿಗಳಾದ ಇನ್ಫೋಸಿಸ್ ಮತ್ತು ವಿಪ್ರೋ ಗಳು ಬೇಡಿಕೆ ಮಂಡಿಸಿದ್ದವು.

ಇದರಿಂದ ಪ್ರವಾಸೋದ್ಯಮವೂ ಅಭಿವೃದ್ಧಿ ಕಾಣಲಿದೆ ಎಂದು ವಿಶ್ವನಾಥ್ ಹೇಳಿದ್ದರು. ಮೈಸೂರಿನಲ್ಲಿ ಕೂಡ ಐಟಿ ಕಂಪನಿಗಳು ನೆಲೆಹೊಂದಿರುವ ಕಾರಣ ಇದು ಅವಶ್ಯಕವಾಗಿತ್ತು.

ವೆಬ್ದುನಿಯಾವನ್ನು ಓದಿ