ಭ್ರಷ್ಟ ರಾಜಕಾರಣಿಗಳ ಆಸ್ತಿ ಮುಟ್ಟುಗೋಲಿಗೆ ಆಮ್ ಆದ್ಮಿ ಪ್ರತ್ಯೇಕ ಪ್ರಣಾಳಿಕೆ

ಶುಕ್ರವಾರ, 11 ಏಪ್ರಿಲ್ 2014 (13:06 IST)
PR
PR
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀಧರ್ ಕಲ್ಲಹಳ್ಳಿ ಆಮ್ ಆದ್ಮಿ ಪಕ್ಷದ ಶಿವಮೊಗ್ಗ ಕ್ಷೇತ್ರಕ್ಕೆ ಪ್ರತ್ಯೇಕವಾದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಭ್ರಷ್ಟ ರಾಜಕಾರಣಿಗಳ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ರೈತರು, ಪ್ರಗತಿಪರರು, ಸಾಹಿತಿಗಳ ಬೆಂಬಲದೊಂದಿಗೆ ಪ್ರಣಾಳಿಕೆ ರೂಪಿಸಲಾಗಿದ್ದು, ಅಡಿಕೆ ಸಮಸ್ಯೆ, ರೈತರಿಗಾಗಿ ಸಂಸದರ ನಿಧಿ ಬಳಕೆ, ಭ್ರಷ್ಟ ರಾಜಕಾರಣಿಗಳ ಆಸ್ತಿ ಮುಟ್ಟುಗೋಲು ಮುಂತಾದ ವಾಗ್ದಾನಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯನ್ನು ಲೂಟಿ ಮಾಡಿದ ಎಲ್ಲ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಪ್ರಣಾಳಿಕೆಯಲ್ಲಿನ ಇತರೆ ಅಂಶಗಳು ಕೆಳಗಿನಂತಿವೆ.

ಕೇಂದ್ರದಿಂದ ಬರುವ ಹಲವು ಕೋಟಿ ರುಪಾಯಿಗಳ ಸಂಸದರದ ನಿಧಿಯ ಸಮರ್ಪಕ ವಿನಿಯೋಗ.
ರೈತರ ಬಗರ್ ಹುಕುಂ ಸಮಸ್ಯೆಗೆ ಸಮನ್ವತೆಯ ಪರಿಹಾರ
ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆ
ನಗರವ್ಯಾಪ್ತಿಯ ರಸ್ತೆ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸುವುದು,

ವೆಬ್ದುನಿಯಾವನ್ನು ಓದಿ