ಮಂಡ್ಯದ ಜನತೆಗೆ ಸೋನಿಯಾ ಲಾಡು..!

ಸೋಮವಾರ, 30 ಸೆಪ್ಟಂಬರ್ 2013 (11:15 IST)
PR
PR
ಎಐಸಿಸಿ ಪ್ರಧಾನ ಅಧ್ಯಕ್ಷೆಯಾಗಿರುವ ಶ್ರೀಮತಿ ಸೋನಿಯಾಗಾಂಧಿಯವರು ಇಂದು ಮಂಡ್ಯಾಗೆ ಆಗಮಿಸಲಿದ್ದಾರೆ. ಮಂಡ್ಯಾ ಜನತೆಗೆ ಲಡ್ಡು ಹಂಚಲು ಕಾಂಗ್ರೆಸ್‌ ಪಕ್ಷ ಸಕಲ ಸಿದ್ಧತೆ ನಡೆಸಿದೆ.

ರಾಜ್ಯದ ಜನತೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲ, ಕಳೆದ ಲೋಕಸಭಾ ಉಪಚುನಾವಣೆಯಲ್ಲಿಯೂ ಕೂಡ ಜನತೆ ಕಾಂಗ್ರೆಸ್‌ ಕೈ ಹಿಡಿದಿದ್ದಾರೆ. ಹೀಗಾಗಿ ಸೋನಿಯಾ ತುಂಬಾ ಖುಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜನತೆಗೆ ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಕೆಪಿಸಿಸಿ ವತಿಯಿಂದ ಇಂದು ಮಂಡ್ಯಾ ಜನತೆಗೆ 1.5 ಲಕ್ಷ ಲಾಡುಗಳನ್ನು ಹಂಚಲಾಗುತ್ತದೆ.

ಮಂಡ್ಯ ಸಮಾವೇಶದಲ್ಲಿ ಇನ್ನು ಏನೇನು ವಿಶೇಷತೆ ಇದೆ? ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ....

PTI
PTI
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭಾಷಣಕ್ಕಾಗಿ ಇಲ್ಲಿನ ಸರ್‌ ಎಂ ವಿಶ್ವೇಶ್ವರಯ್ಯಾ ಕ್ರೀಡಾಂಗಣ ಸಜ್ಜಾಗಿದೆ. ಕಾರ್ಯಕ್ರಮ ಮುಗಿದ ನಂತರ ಕೊನೆಯಲ್ಲಿ, ಎಲ್ಲಾ ಮಹಾ ದ್ವಾರಗಳಲ್ಲಿ ಜನರಿಗೆ ಸಿಹಿ ವಿತರಿಸಲಾಗುವುದು ಎಂದು ಕಾಂಗ್ರೆಸ್‌ ವಕ್ತಾರರು ತಿಳಿಸಿದ್ದಾರೆ. ಅಷ್ಟೆ ಅಲ್ಲ, ಸಾರ್ವಜನಿಕರ ಬಾಯಾರಿಕೆಯನ್ನು ನೀಗಿಸಲು ಮಜ್ಜಿಗೆ ಹಾಗೂ ನೀರು ವಿತರಣೆಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ