ಮಾಜಿ ಪ್ರಧಾನಿ ದೇವೇಗೌಡರಿಗೆ ಹೊಟ್ಟೆ ಉರೀತಿದೆ - ಸಿದ್ದು

ಸೋಮವಾರ, 19 ಆಗಸ್ಟ್ 2013 (14:55 IST)
PR
PR
"ಅಪ್ಪ ಮಕ್ಕಳು ಇಬ್ರೂ ವಿಲವಿಲ ಅಂತ ಒದ್ದಡ್ತಿದಾರೆ. ನಾನು ಸಿಎಂ ಆಗಿರೋದನ್ನು ಸಹಿಸಿಕೊಳ್ಳದೇ ಗೌಡರು ಮತ್ತು ಕುಮಾರ ಸ್ವಾಮಿ ಇಬ್ಬರೂ ಹೊಟ್ಟೆಕಿಚ್ಚು ಪಡ್ತಿದ್ದಾರೆ. ಅವರು ಯಾವುದೇ ಜನಪರ ಕೆಲಸ ಮಾಡಿಲ್ಲ. ಆದ್ರೆ ನಾನು ಮಾಡ್ತಿದೀನಲ್ಲ ಅಂತ ಹೊಟ್ಟೆ ಉರಿ" ಎಂದು ಸಿಎಂ ಸಿದ್ದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.

ಉಪಚುನಾವಣೆಯ ಪ್ರಯುಕ್ತ ನಗರದಲ್ಲಿ ಪ್ರಚಾರ ನಡೆಸಿದ ಸಿಎಂ ಸಿದ್ದು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ರು.

ಸಿಎಂ ಸಿದ್ದು ಅವರ ಮಾತಿಗೆ ದನಿಗೂಡಿಸಿದ ರಮ್ಯಾ "ನಿಜ್ವಾಗ್ಲೂ ನಾನು ಗೆದ್ದರೆ ಒಳ್ಳೆಯ ಕೆಲಸ ಮಾಡ್ತೀನಿ. ಜನಪರ ಕೆಲಸಗಳನ್ನು ಕೈಗೆತ್ತಿಕೊಳ್ತೀನಿ. ನಿಮ್ಮ ಸೇವೆ ಮಾಡೋದಕ್ಕೆ ಒಂದು ಅವಕಾಶ ಮಾಡಿಕೊಡಿ" ಎಂದು ಮತದಾರರಲ್ಲಿ ಕೇಳಿಕೊಂಡ್ರು

ವೆಬ್ದುನಿಯಾವನ್ನು ಓದಿ