ಮೈಸೂರು ಪೋಲೀಸರ ವಿರುದ್ಧ ಗೌಡರು ಗರಂ.

ಸೋಮವಾರ, 19 ಆಗಸ್ಟ್ 2013 (14:35 IST)
PR
PR
ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ಪೋಲೀಸರು ಯಾವುದೇ ರೀತಿಯ ರಕ್ಷಣೆ ನೀಡಿಲ್ಲ. " ಮೈಸೂರು ಪೋಲೀಸರು ನನಗೆ ಬೆಂಗಾವಲು ಪಡೆ ನೀಡಿಲ್ಲ" ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೈಸೂರು ಪೋಲೀಸರ ನಿರ್ಲಕ್ಷತೆ ವಿರುದ್ಧ ಗೌಡರು ಕಿಡಿ ಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಪೋಲೀಸ್ ವರಿಷ್ಟರಾದ ಎಸ್ ಪಿ ಅಭಿನವ್ ಖರೆ "ನಾವು ದೇವೇಗೌಡರ ವಾಹನಕ್ಕೆ ಬೆಂಗಾವಲು ಪಡೆಯನ್ನು ನೀಡಿದ್ದೇವೆ. ಬಹುಷಃ ದೇವೇಗೌಡರು ನಮ್ಮ ವಾಹನವನ್ನು ಗಮನಿಸಿಲ್ಲ. ಹೀಗಾಗಿ ಬೆಂಗಾವಲು ಪಡೆ ನೀಡಿಲ್ಲ ಎಂದು ಗೌಡರು ಆರೋಪಿಸಿದ್ದರೆ" ಎಂದು ಹೇಳಿದ್ರು.

ಉಪಚುನಾವಣೆಯ ಪ್ರಚಾರದ ಪ್ರಯುಕ್ತ ದೇವೇಗೌಡರು ಮೈಸೂರಿನ ಕೆ ಆರ್‌ ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೋಲೀಸರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲವೆಂದು ಆರೋಪಿಸಿದ್ರು.

ವೆಬ್ದುನಿಯಾವನ್ನು ಓದಿ